ಕುಂಬ್ರ ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕ ಸಂಘ ಆಯ್ಕೆ

0

ಗೌರವಾಧ್ಯಕ್ಷ: ಅಬ್ದುಲ್ ರಹಿಮಾನ್ ಹಾಜಿ; ಅಧ್ಯಕ್ಷ: ಬಾತಿಷಾ ಗಟ್ಟಮನೆ; ಕಾರ್ಯದರ್ಶಿ: ಸತೀಶ್ ದರ್ಬೆತ್ತಡ್ಕ

ಪುತ್ತೂರು: ಸ್ನೇಹ ಸಾಗರ ಅಟೋ ರಿಕ್ಷಾ ಚಾಲಕ ಮಾಲಕರ ಸಂಘ ಕುಂಬ್ರ ಇದರ ಅಧ್ಯಕ್ಷರಾಗಿ ಬಾತಿಷಾ ಗಟ್ಟಮನೆ, ಕಾರ್ಯದರ್ಶಿಯಾಗಿ ಸತೀಶ್ ದರ್ಬೆತ್ತಡ್ಕ ಹಾಗೂ ಕೋಶಾಧಿಕಾರಿಯಾಗಿ ಜಯರಾಮ್ ಉರುವ ಪುನರಾಯ್ಕೆಗೊಂಡಿದ್ದಾರೆ.


ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕರವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಪುನರಾಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕರವರನ್ನು ಮುಂದುವರಿಸಲಾಯಿತು. ಗೌರವ ಸಲಹೆಗಾರರಾಗಿ ರಾಜೇಶ್ ರೈ ಪರ್ಪುಂಜ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್, ಜೊತೆ ಕಾರ್ಯದರ್ಶಿಯಾಗಿ ಸಂದೀಪ್ ದರ್ಬೆತ್ತಡ್ಕ ಆಯ್ಕೆಯಾದರು.ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಇರ್ಷಾದ್, ಅಬೂಬಕ್ಕರ್ ಅಡ್ಕ, ಚಂದ್ರ ಬಿ, ಬಶೀರ್ ಕಡ್ತಿಮಾರ್, ಸುಂದರ ಗೌಡ ಆಯ್ಕೆಯಾದರು.

LEAVE A REPLY

Please enter your comment!
Please enter your name here