ಪುತ್ತೂರು ರೈಲ್ವೇ ನಿಲ್ದಾಣ ಬಳಿ ಅಸ್ವಸ್ಥಗೊಂಡ ಮಡಿಕೇರಿಯ ವ್ಯಕ್ತಿ ಮೃತ್ಯು

0

ಪುತ್ತೂರು: ಪುತ್ತೂರು ರೈಲ್ವೇ ನಿಲ್ದಾಣ ಬಳಿ ಎರಡು ವಾರಗಳ ಹಿಂದೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದ ಮಡಿಕೇರಿಯ ವ್ಯಕ್ತಿ ಪುತ್ತೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಡಿಕೇರಿಯ ಮರಗೋಡು ಅಯ್ಯಪ್ಪ ಬಡಾವಣೆ ನಿವಾಸಿ ತಿಮ್ಮಪ್ಪ ನಾಯ್ಕ್ ಅವರು ಮೃತಪಟ್ಟವರು.

ಅವರು ಆ.12ರಂದು ಸಂಜೆ ಪುತ್ತೂರು ರೈಲ್ವೇ ನಿಲ್ದಾಣದ ಬಳಿ ಅಸ್ವಸ್ಥಗೊಂಡು ಬಿದ್ದಿದ್ದರು. ಇದನ್ನು ಗಮನಿಸಿದ ಚಿಕ್ಕಮುಡ್ನೂರು ಗ್ರಾಮದ ಸಿಧ್ಯಾಳದ ಅಶ್ರಫ್ ಎಂಬವರು ಅಸ್ವಸ್ಥ ವ್ಯಕ್ತಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ 108 ಆಂಬುಲೆನ್ಸ್ ಮೂಲಕ ಕಳುಹಿಸಿಕೊಟ್ಟರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಆ.30ರಂದು ನಿಧನರಾಗಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here