ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ತಂಡಕ್ಕೆ ರನ್ನರ್ ಆಫ್ ಪ್ರಶಸ್ತಿ

0

ಉಪ್ಪಿನಂಗಡಿ : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ಕಡಬ ಇಲ್ಲಿ ನಡೆದ 2023-24ನೇ ಸಾಲಿನ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ 14ರ ವಯೋಮಾನದ ಬಾಲಕರ ತಂಡವು ರನ್ನರ್ ಆಫ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ. ಈ ತಂಡದಲ್ಲಿ 7ನೇ ತರಗತಿಯ ಸಮೃದ್ಧ ಜೈನ್, ಆಯತ್ತುಲ್ಲಾ ಸಲೀಂ, ಜಿತೇಶ್ ಎಸ್. ವಿ, ಶ್ರೇಯಸ್ಸ್, ಮೊಹಮ್ಮದ್ ಅಝಮಲ್, ಪ್ರೀತಮ್, 6ನೇ ತರಗತಿಯ ಮೊಹಮ್ಮದ್ ನಶಾ, ವಚನ್ ಕನ್ಯಾನ, ಕೆ. ಅತುಲ್ ನಾಯಕ್, ಮೊಹಮ್ಮದ್ ಇರಾಝ್, ಶಿಶಿರ್ ಜೆ ಸಾಲ್ಯಾನ್, ನಿಕೇತನ್ ಸಿ.ಟಿ ಭಾಗವಹಿಸಿರುತ್ತಾರೆ. 7ನೇ ತರಗತಿಯ ಜಿತೇಶ್ ಎಸ್. ವಿ ಬೆಸ್ಟ್ ಆಟ್ಯಾಕರಾಗಿ ಆಯ್ಕೆಯಾಗಿರುತ್ತಾರೆ. ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾ ತರಬೇತಿ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here