ಕಾಣಿಯೂರು: ನಿವೃತ್ತಿಗೊಂಡ ರೈಲ್ವೆ ಇಲಾಖೆಯ ಮಾಧವ ರೈಯವರಿಗೆ ಬೀಳ್ಕೊಡುಗೆ

0

ಕಾಣಿಯೂರು: ರೈಲ್ವೆ ಇಲಾಖೆಯಲ್ಲಿ ಸುದೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ಆ 31ರಂದು ನಿವೃತ್ತಿಗೊಂಡ ಮಾಧವ ರೈ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಪುತ್ತೂರು ಕಬಕ ತುಳುನಾಡ ರೈಲ್ವೆ ಸಹದ್ಯೋಗಿಗಳು ಇಂಜೀನಿಯರ್ ವಿಭಾಗದ ವತಿಯಿಂದ ಕಾಣಿಯೂರು ಶ್ರೀ ಲಕ್ಷ್ಮಿನರಸಿಂಹ ಭಜನಾ ಮಂದಿರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕಬಕ ಪುತ್ತೂರು Pway / ಎಇ ಚೇತನ್ ವಿ, ದೇವರಾಜು ಡೆಪ್ಪುನಿ, ಅಶ್ವಿನಿ ಕುಮಾರ್, ಸುಂದರ ಗೌಡ, ರಾಜು ಇ.ಎಸ್, ಸಜೀವ್ ಪಿ.ಕೆ, ಅಶೋಕ್ ಗೌಡ, ರಾಜೇಶ್ ನಾಯಕ್, ದಿನೇಶ್ ಗೌಡ, ದಯಾನಂದ, ಪುರುಷೋತ್ತಮ್ ಗೌಡ, ಧನಂಜಯ ಗೌಡ, ಲೋಕಯ್ಯ ಗೌಡ, ಪ್ರಭಾಕರ್ ಗೌಡ, ಹರೀಶ್ ಕೆ.ಎಂ, ನವೀನ್ ಸಲ್ಯಾನ್, ಸುಧಾಕರ್ ಶೆಟ್ಟಿ, ಗಣೇಶ್ ಗೌಡ, ವನೀಶ್ ಗೌಡ, ರವೀಂದ್ರ ನಾಯ್ಕ್, ಹಕಿಮ್ ನೇರಳಕಟ್ಟೆ, ಕಾರ್ತೀಕ್ ಗೌಡ, ಮಹೇಂದ್ರ ಗೌಡ, ಪವಿತ್ರಾ ಕೆ, ಪ್ರವೀಣ್ ಕುಮಾರ್, ಕೇಶವ ಪುತ್ತೂರು, ಕೃಷ್ಣ ಪ್ರಕಾಶ್, ರಾಜೇಶ್ ಹರಿಮನೆ, ಶಕಿಲ್, ಶಶಿಕಲಾ, ಯಶೋಧರ ಗೌಡ, ಜಿತೇಶ್ ಸುವರ್ಣ, ಪ್ರೀತಿ ವಸಂತ್, ನಾರಾಯಣ ರಾಮ್, ನಿವೃತ್ತ ರೈಲ್ವೆ ಇಲಾಖೆಯ ನಾರ್ಣಪ್ಪ ಗೌಡ ಅನಿಲ, ರಾಮಣ್ಣ ಗೌಡ ಬರಮೇಲು, ಕಾಣಿಯೂರು ಗ್ರಾ.ಪಂ.ಸದಸ್ಯ ವಸಂತ ಪೆರ್ಲೋಡಿ, ಕಾಣಿಯೂರು ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರ ಅನಿಲ, ಸೀತಾರಾಮ ಅನಿಲ ಮತ್ತೀತರರು ಉಪಸ್ಥಿತರಿದ್ದರು. ರಾಜೇಶ್ ಗಡಿಪಿಲ ಸ್ವಾಗತಿಸಿ, ಸನ್ಮಾನಿತ ಪರಿಚಯ ವಾಚಿಸಿದರು. ತೀರ್ಥರಾಮ ಕಾರ್ಯಕ್ರಮ ನಿರೂಪಿಸಿದರು. ಅಮಿತ್ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here