ಸವಣೂರಿನಲ್ಲಿ ಇಂಡಿಯಾ 1 ಎಟಿಎಂ ಲೋಕಾರ್ಪಣೆ

0

ಶುಲ್ಕ ರಹಿತ ಸೇವೆ: ಬ್ಯಾಂಕ್‌ಗಳ ರಜಾ ದಿನಗಳಲ್ಲೂ ನಗದು ಲಭ್ಯ

ಉಪ್ಪಿನಂಗಡಿ: ಕಡಬ ತಾಲೂಕಿನ ಸವಣೂರಿನಲ್ಲಿರುವ ಪ್ರಶಾಂತ್ ವಾಣಿಜ್ಯ ಸಂಕೀರ್ಣದ ಎದುರುಗಡೆ ಉಚಿತ ಸೇವೆಯ ಇಂಡಿಯಾ 1 ಎಟಿಎಂ ಆ.30ರಂದು ಶುಭಾರಂಭಗೊಂಡಿತು. ನೂತನ ಎಟಿಎಂ ವ್ಯವಸ್ಥೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಕಟ್ಟಡದ ಮಾಲಕರಾದ ಅಬ್ದುಲ್ಲಾ ಸವಣೂರು, ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಎಟಿಎಂವೊಂದು ಬೇಕೆನ್ನುವುದು ಇಲ್ಲಿನ ಜನರ ಬಹುಕಾಲದ ಬೇಡಿಕೆಯಾಗಿತ್ತು. ಇದಕ್ಕೆ ಇದೀಗ ಪ್ರಶಾಂತ್ ಡಿಕೋಸ್ತ ಅವರು ಸ್ಪಂದಿಸಿದ್ದು, ಇಂಡಿಯಾ 1 ಎಟಿಎಂ ಶುಲ್ಕ ರಹಿತ ಉಚಿತ ಸೇವೆಯನ್ನು ನೀಡುವುದಲ್ಲದೆ, ದಿನದ 24 ಗಂಟೆಯೂ ಕಾರ್ಯನಿರ್ವಹಿಸುವುದು ಸಂತಸದ ವಿಷಯ. ಇದು ಇಲ್ಲಿನವರಿಗೆ ತುಂಬಾ ಸಹಕಾರಿಯಾಗಲಿದೆ ಎಂದರು.

ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರೂ, ಇಂಡಿಯಾ 1 ಎಟಿಎಂನ ಕಾರ್ಯನಿರ್ವಾಹಕರೂ ಆಗಿರುವ ಪ್ರಶಾಂತ್ ಡಿಕೋಸ್ತ ಅವರು ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ, ಈಗಾಗಲೇ ಉಪ್ಪಿನಂಗಡಿ, ಕಲ್ಲೇರಿಯಲ್ಲಿ ಇಂಡಿಯಾ 1 ಎಟಿಎಂ ಕಾರ್ಯನಿರ್ವಹಿಸುತ್ತಿದ್ದು, ಜನರಿಗೆ ಉತ್ತಮ ಸೇವೆ ನೀಡುತ್ತಿವೆ. ಸವಣೂರಿನಲ್ಲೂ ಒಂದು ಇಂಡಿಯಾ 1 ಎಟಿಎಂ ಅನ್ನು ತೆರೆಯಬೇಕು ಎಂದು ನನಗೆ ಈ ಭಾಗದವರಿಂದ ಕಳೆದ 5-6 ತಿಂಗಳಿನಿಂದ ಫೋನ್ ಕಾಲ್‌ಗಳು ಬರುತ್ತಿದ್ದವು. ಮೂರನೇ ಶಾಖೆಯಾಗಿ ಇದೀಗ ಇಲ್ಲೂ ಇಂಡಿಯಾ 1 ಎಟಿಎಂ ಶುಭಾರಂಭಗೊಂಡಿದೆ. ಸದ್ಯದಲ್ಲೇ ಬೇರೆ ಕಡೆಗಳಲ್ಲಿ 2 ಶಾಖೆಗಳನ್ನು ಆರಂಭಿಸುವ ಯೋಜನೆಯಿದೆ. ಇಂಡಿಯಾ 1 ಎಟಿಎಂ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಅಧಿಕೃತಗೊಂಡಿರುವ ಸಂಸ್ಥೆಯಾಗಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಗ್ರಾಹಕರಿಗೆ ಶುಲ್ಕ ರಹಿತ ಉಚಿತ ಸೇವೆ ನೀಡಲಿದೆ. ಅಲ್ಲದೇ, ಬ್ಯಾಂಕ್‌ಗಳಿಗೆ ಎಷ್ಟೇ ದಿನ ರಜೆ ಇದ್ದರೂ ಈ ಎಟಿಎಂನಲ್ಲಿ ನಗದು ಲಭ್ಯವಿರುತ್ತದೆ. ಎಲ್ಲಾ ಬ್ಯಾಂಕ್‌ಗಳ ಎಟಿಎಂ ಕಾರ್ಡ್‌ಗಳನ್ನು ಇದರಲ್ಲಿ ಉಪಯೋಗಿಸಬಹುದಾಗಿದ್ದು, ಎಲ್ಲಾ ಡೆಬಿಟ್ ಕಾರ್ಡ್‌ಗಳನ್ನು ಇದರಲ್ಲಿ ಬಳಸಬಹುದು. ಆದ್ದರಿಂದ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ಸ್ಥಳೀಯ ಉದ್ಯಮಿ ಸಲೀಂ ಈ ಸಂದರ್ಭ ಉಪಸ್ಥಿತರಿದ್ದರು. ಸಿಬ್ಬಂದಿ ಮನೋಜ್ ವಂದಿಸಿ, ಭರತ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here