ಪಡೀಲ್‌ನಲ್ಲಿ ಸ್ಕೂಟರ್ ಪಲ್ಟಿಯಾಗಿ ಗಂಭೀರ ಗಾಯಗೊಂಡಿದ್ದ ಸವಾರ ಮೃತ್ಯು

0

ಪುತ್ತೂರು: 4 ದಿನಗಳ ಹಿಂದೆ ಪುತ್ತೂರು ಪಡೀಲ್‌ನಲ್ಲಿ ಚಾಲಕನ ಹತೋಟಿ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಸ್ಕೂಟರ್ ಪಲ್ಟಿಯಾದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸೆ.2ರಂದು ರಾತ್ರಿ ಮೃತಪಟ್ಟಿದ್ದಾರೆ.


ಕೆಮ್ಮಾಯಿಯಲ್ಲಿ ಕಬ್ಬಿಣದ ಕಪಾಟು ತಯಾರಿಯ ಪ್ಯಾಕ್ಟರಿ ಹೊಂದಿರುವ ಚಿಕ್ಕಮುಡ್ನೂರು ಕಟ್ಟೆಮಜಲು ನಿವಾಸಿ ಸ್ಕೂಟರ್ ಸವಾರ ರಾಜು ಗೌಡ ಒಕ್ಕಲಿಗ (60ವ) ಮೃತಪಟ್ಟವರು. ರಾಜು ಗೌಡ ಒಕ್ಕಲಿಗ ಅವರು ಆ.30 ರ ರಾತ್ರಿ ಪುತ್ತೂರಿನಿಂದ ಮನೆ ಕಡೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಅವರ ಸ್ಕೂಟರ್ ಪಡೀಲ್ ವೇಳೆ ಹತೋಟಿ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ರಾಜು ಗೌಡ ಒಕ್ಕಲಿಗ ಅವರನ್ನು ಪುತ್ತೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರು ಪಸ್ಟ್‌ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ.31ರಂದು ಅವರನ್ನು ಅಲ್ಲಿಂದ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸೆ.2ರಂದು ರಾತ್ರಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here