ಸುನಾದ ಸಂಗೀತ ಕಲಾಶಾಲೆಯ ಸುನಾದ ಯುವದನಿ-ವಿಂಶತಿ ಸಂಭ್ರಮ

0

ಪುತ್ತೂರು: ವಿದ್ವಾನ್ ಕಾಂಚನ ಎ.ಈಶ್ವರ ಭಟ್‌ರವರ ನೇತೃತ್ವದಲ್ಲಿ ನಡೆದುಕೊಂಡು ಬರುತ್ತಿರುವ ಸುನಾದ ಯುವದನಿ ಸರಣಿ ಕಾರ್ಯಕ್ರಮದ 20ನೇ ವರ್ಷದ ಸುನಾದ ಯುವದನಿ-ವಿಂಶತಿ ಸಂಭ್ರಮ ಸೆ.3ರಂದು ಸುನಾದ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯನ್ನು ವಿದ್ವಾನ್ ಶ್ರೀಹರಿಭಟ್ ಎನ್.ಎಚ್ ನಡೆಸಿಕೊಟ್ಟರು. ವಯಲಿನ್‌ನಲ್ಲಿ ವಿದ್ವಾನ್ ವೇಣುಗೋಪಾಲ್ ಶ್ಯಾನುಭೋಗ್, ಮೃದಂಗದಲ್ಲಿ ಡಾ.ಅಕ್ಷಯನಾರಾಯಣ ಕಾಂಚನ ಪಕ್ಕವಾದ್ಯದಲ್ಲಿ ಸಹಕರಿಸಿದರು. ಬಳಿಕ ಸುನಾದದ ಶಿಷ್ಯವೃಂದ ದೃಶ್ಯಕಾವ್ಯ, ಗಾನಕಲಾಕುಂಚ ಹಾಗೂ ಗುರುವಂದನೆ ನಡೆಸಿಕೊಟ್ಟರು. ವಿದುಷಿ ಮಾಲತಿ ಡಿ. ಹಾಗೂ ದೀಕ್ಷಿತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here