ಸಮಸ್ತ ಜಂಇಯ್ಯತುಲ್ ಉಲಮಾ ಪುತ್ತೂರು ತಾಲೂಕು ಮಹಾಸಭೆ

0

ಅಧ್ಯಕ್ಷರಾಗಿ ಪುತ್ತೂರು ತಂಙಳ್, ಕಾರ್ಯದರ್ಶಿ ಹಮೀದ್ ದಾರಿಮಿ ಪುನರಾಯ್ಕೆ

ಪುತ್ತೂರು : ಸಮಸ್ತ ಜಂ ಇಯ್ಯತುಲ್ ಉಲಮಾ ಪುತ್ತೂರು ತಾಲೂಕು ಸಮಿತಿಯ ಮಹಾ ಸಭೆಯು ಇತ್ತೀಚೆಗೆ ಬದ್ರಿಯಾ ಮಸೀದಿ ಮದ್ರಸಾ ಹಾಲ್ ನಲ್ಲಿ ನಡೆಯಿತು. ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸಮಸ್ತ ಮುಶಾವರ ಸದಸ್ಯರಾದ ಉಸ್ಮಾನುಲ್ ಫೈಝಿ ಸಾಲ್ಮರ ಉದ್ಘಾಟನೆ ಗೈದರು.ಹಸನ್ ಬಾಖವಿ ವಾಲೆ ಮುಂಡೋವು ಕಿರಾಅತ್ ನಡೆಸಿದರು. ರಶೀದ್ ರಹ್ಮಾನಿ ಪರ್ಲಡ್ಕ ವರದಿ ವಾಚಿಸಿ, ಆಸಿಫ್ ಅಝ್ಹರಿ ಇರ್ದೆ ಲೆಕ್ಕ ಪತ್ರ ಮಂಡಿಸಿದರು.


ಸಮಿತಿಯ ನೂತನ ಅಧ್ಯಕ್ಷರಾಗಿ ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್, ಉಪಾಧ್ಯಕ್ಷರುಗಳಾಗಿ ಉಸ್ಮಾನುಲ್ ಫೈಝಿ ತೋಡಾರ್,ಉಮರ್ ದಾರಿಮಿ ಸಾಲ್ಮರ, ಉಮರ್ ಫೈಝಿ ಸಾಲ್ಮರ, ಅಬ್ಬಾಸ್ ಮದನಿ ಮೊಟ್ಟೆತಡ್ಕ,ಶಂಸುದ್ದೀನ್ ದಾರಿಮಿ ಪಮ್ಮಲೆ,ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಕೋಶಾಧಿಕಾರಿಯಾಗಿ ಉಮರ್ ಮುಸ್ಲಿಯಾರ್ ನಂಜೆ, ಕಾರ್ಯದರ್ಶಿಗಳಾಗಿ ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ, ಅಬ್ದುಲ್ ಕರೀಂ ದಾರಿಮಿ ಕುಂಬ್ರ,ಅಬ್ಬಾಸ್ ದಾರಿಮಿ ಕೆಲಿಂಜ, ಅಶ್ರಫ್ ದಾರಿಮಿ ಸಂಟ್ಯಾರ್, ಫತ್ವಾ ಸಮಿತಿ ಸದಸ್ಯರಾಗಿ ಇಬ್ರಾಹಿಂ ದಾರಿಮಿ ಮಾಡನ್ನೂರು,ಅಝೀಝ್ ದಾರಿಮಿ ಕೊಡಾಜೆ,ಅಬೂಬಕ್ಕರ್ ದಾರಿಮಿ ಕಟ್ಟತ್ತಾರು,ಶಾಫಿ ಇರ್ಫಾನಿ ಕಲ್ಲೆಗ, ಸಂಘಟನಾ ಕಾರ್ಯದರ್ಶಿಯಾಗಿ ಆಸಿಫ್ ಅಝ್ಹರಿ ಇರ್ದೆ,ಸಹ ಕಾರ್ಯದರ್ಶಿಗಳಾಗಿ ಶುಕೂರ್ ದಾರಿಮಿ ಕಾವು,ಹಸನ್ ಬಾಖವಿ ವಾಲೆಮುಂಡೋವು,ಪತ್ರಿಕಾ ಕಾರ್ಯದರ್ಶಿಗಳಾಗಿ ಅಶ್ರಫ್ ರಹ್ಮಾನಿ ವೀರಮಂಗಿಲ,ಅಲೀ ಮನ್ನಾನಿ ಮಿತ್ತೂರು ಆಯ್ಕೆ ಮಾಡಲಾಯಿತು. ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ಸ್ವಾಗತಿಸಿ, ಆಸಿಫ್ ಅಝ್ಹರಿ ಇರ್ದೆ ಧನ್ಯವಾದಗೈದರು.

LEAVE A REPLY

Please enter your comment!
Please enter your name here