ಪಡುವನ್ನೂರು ದರೋಡೆ ನಡೆದ ಗುರುಪ್ರಸಾದ್ ಮನೆಗೆ ಮಾಜಿ ಶಾಸಕ ಭೇಟಿ ̲

0

ಸ್ಥಳದಲ್ಲೇ ಎಸ್ಪಿಗೆ ಪೋನಾಯಿಸಿದ ಸಂಜೀವ ಮಠಂದೂರು

ಪುತ್ತೂರು: ಬಡಗನ್ನೂರು ಗ್ರಾ.ಪಂ ಮಾಜಿ ಸದಸ್ಯ ಪಡುವನ್ನೂರು ಗ್ರಾಮದ ಕುದ್ಕಾಡಿ ಗುರುಪ್ರಸಾದ್ ರೈ ಯವರ ಮನೆಗೆ ಡಕಾಯಿತರ ತಂಡವೊಂದು ಮನೆ ಮಂದಿಯನ್ನು ಕಟ್ಟಿ ಹಾಕಿ ದರೋಡೆ ಮಾಡಿದ ಘಟನೆಗೆ ಸಂಬಂಧಿಸಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸೆ.8ರಂದು ಅಲ್ಲಿಗೆ ಭೇಟಿ ನೀಡಿ ಡಕಾಯಿತರಿಂದ ಭಯಗೊಂಡಿರುವ ಗುರುಪ್ರಸಾದ್ ಅವರ ತಾಯಿಗೆ ಧೈರ್ಯ ತುಂಬಿದರು.
ಸಂಜೀವ ಮಠಂದೂರು ಅವರು ಘಟನೆ ಮಾಹಿತಿ ಪಡೆದು ದ.ಕ.ಜಿಲ್ಲಾ ಎಸ್ಪಿಗೆ ಪೋನಾಯಿಸಿ ಇನ್ನಷ್ಟು ಮಾಹಿತಿ ಪಡೆದು ಕೊಂಡು ಆದಷ್ಟು ಬೇಗ ಪ್ರಕರಣ ಡಕಾಯಿತರನ್ನು ಮಟ್ಟಹಾಕಬೇಕು. ಇಲ್ಲವಾದಲ್ಲಿ ಜನರಲ್ಲಿ ಇನ್ನಷ್ಟು ಭಯದ ವಾತಾವರಣ ಉಂಟಾಗುತ್ತದೆ. ಹಳ್ಳಿ ಪ್ರದೇಶದಲ್ಲಿ ಮನೆಗಳು ದೂರ ಇರುವುದರಿಂದ ರಾತ್ರಿ ಗಸ್ತು ವ್ಯವಸ್ಥೆ ಚುರುಕುಗೊಳಿಸುವಂತೆ ಹೇಳಿದ್ದಾರೆ. ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಅರಿಯಡ್ಕ ಶಕ್ತಿ ಕೇಂದ್ರ ಪ್ರಮುಖ್ ಸಚಿನ್ ರೈ ಪಾಪೆಮಜಲು ಮಾಜಿ ಶಾಸಕರ ಜೊತೆಗಿದ್ದರು.‌

LEAVE A REPLY

Please enter your comment!
Please enter your name here