ಉಪ್ಪಿನಂಗಡಿ: ತರಕಾರಿ ಅಂಗಡಿಗೆ ನುಗ್ಗಿದ ಕಳ್ಳರು – ಸೌತೆಕಾಯಿ, ಬಟಾಟೆ ಮೂಟೆ ಹೊತ್ತೊಯ್ದರು

0

ಉಪ್ಪಿನಂಗಡಿ: ಇಲ್ಲಿನ ಸುಶೀಲ-ಲಕ್ಷ್ಮಣ್ ಕಾಂಪ್ಲೆಕ್ಸ್ನಲ್ಲಿರುವ ತರಕಾರಿ ಅಂಗಡಿಯಿಂದ ತರಕಾರಿ ಕಳವು ನಡೆದಿರುವ ಬಗ್ಗೆ ವರದಿಯಾಗಿದೆ.
ಸುಧಾಕರ ನಾಯಕ್ ಎಂಬವರ ಮಾಲಕತ್ವದ ತರಕಾರಿ ಅಂಗಡಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಊರಿನ ಸೌತೆಕಾಯಿ, ಬಟಾಟೆ ಮೂಟೆಯನ್ನು ಕದ್ದೊಯ್ದಿದ್ದಾರೆ. ಈವರೆಗೆ ಇತರ ಬೆಲೆ ಬಾಳುವ ವಸ್ತುಗಳ ಮೇಲೆ ಕಣ್ಣಿಟ್ಟಿದ್ದ ಕಳ್ಳರು ಇದೀಗ ತರಕಾರಿಯ ಮೇಲೂ ನಿಗಾವಿರಿಸಿದ್ದು, ತರಕಾರಿ ವ್ಯಾಪಾರಿಗಳನ್ನು ಕಂಗೆಡಿಸಿದೆ.

LEAVE A REPLY

Please enter your comment!
Please enter your name here