ಬೊಳುವಾರು ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ

0


ಪುತ್ತೂರು: ಸೆ.1ರಂದು ವಾಹನ ಅಪಘಾತದಲ್ಲಿ ದುರ್ಮರಣಕ್ಕೀಡಾದ ನಾಗರ ಹಾವಿನ ಸರ್ಪಸಂಸ್ಕಾರವು ಸೆ.12ರಂದು ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ನಡೆಯಿತು.
ಕ್ಷೇತ್ರ ಪವಿತ್ರಪಾಣಿ ಬಾಲಸುಬ್ರಹ್ಮಣ್ಯ ಭಟ್, ನವದುರ್ಗಾ ಹೊಟೇಲ್‌ನ ದೇವಿಪ್ರಸಾದ್ ಮಲ್ಯ, ದಿವ್ಯಶ್ರೀಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೆ.ಮೂ. ಶ್ರೀಧರ್ ಭಟ್ ಕಬಕ ರವರು ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು. ಬೆಳಿಗ್ಗೆ ಗಣಪತಿ ಹೋಮ, ವಟು ಆರಾಧನೆ ಮೂಲಕ ಸರ್ಪಸಂಸ್ಕಾರ ನಡೆಸಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಕ್ಷೇತ್ರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಪ್ರವೀಣ್ ನಾಯಕ್, ಪ್ರಧಾನ ಕಾರ್ಯದರ್ಶಿ ವಿ.ಕೆ. ಶೆಟ್ಟಿ, ಕೋಶಾಧಿಕಾರಿ ಪ್ರಸನ್ನ ಬಳ್ಳಾಲ್, ಸ್ಥಳೀಯ ನಗರಸಭಾ ಸದಸ್ಯ ಸಂತೋಷ್‌ಕುಮಾರ್ ಬೊಳುವಾರು, ಭಾಮಿ ಜಗದೀಶ್ ಶೆಣೈ, ಹರಿನಾರಾಯಣ ಹೊಳ್ಳ, ಪುರುಷೋತ್ತಮ ಮುಂಗ್ಲಿಮನೆ, ಪುನೀತ್ ಮಡತ್ತಾರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯಕರ ಸೇವಕರ ತಂಡ, ಬೊಳುವಾರು ಆಸುಪಾಸಿನ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here