ದುಬೈ: ಶಾಸಕ ಅಶೋಕ್ ರೈಯವರನ್ನು ಸ್ವಾಗತಿಸಿದ ಪುತ್ತೂರಿನ ಉದ್ಯಮಿಗಳು

0

ದುಬೈ: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ವಿದೇಶ ಪ್ರವಾಸದಲ್ಲಿದ್ದು ಸೆ.14 ರಂದು ದುಬೈಗೆ ಭೇಟಿ ನೀಡಿದ್ದಾರೆ. ದುಬೈಗೆ ಭೇಟಿ ನೀಡಿದ ವೇಳೆ ಪುತ್ತೂರು,ಸುಳ್ಯ,ಬೆಳ್ಳಾರೆ ಸೇರಿದಂತೆ ಜಿಲ್ಲೆಯ ಅನುವಾಸಿ ಭಾರತೀಯ ಉದ್ಯಮಿಗಳು ಶಾಸಕರನ್ನು ಭೇಟಿಯಾದರು.ದುಬೈಯ ಜುಮೈರಾ ತಾಜ್ ಹೊಟೇಲಿನಲ್ಲಿ ಶಾಸಕರಿಗೆ ಆತ್ಮೀಯ ಸ್ವಾಗತ ನೀಡಿ, ಅಭಿನಂದಿಸಿದರು.


ಬಳಿಕ ನಡೆದ ಸೌಹಾರ್ದ ಭೇಟಿಯಲ್ಲಿ ಮಾತನಾಡಿದ ಶಾಸಕರಾದ ಅಶೋಕ್ ರೈ, ಚುನಾವಣೆ ಸಂದರ್ಭ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ದುಬೈನಲ್ಲಿ ನೆಲೆಸಿರುವ ನಮ್ಮೂರಿನ ಯುವಕರ ಸಹಕಾರ ಅವಿಸ್ಮರಣೀಯ. ನಮ್ಮೂರಿನ ಜನಪರ ಕೆಲಸಗಳಿಗೆ ಸದಾ ನಿಮ್ಮ ಬೆಂಬಲ ಮುಂದೆಯೂ ಬೇಕು ಎಂದ ಅವರು, ದುಬೈಯ ಅನಿವಾಸಿ ಭಾರತೀಯ ಉದ್ಯಮಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದುಬೈಯ ರಿಯಲ್ ಎಸ್ಟೇಟ್ ಉದ್ಯಮಿ ಅನ್ಸಾರ್ ಬಿ ಎಚ್ ಬೆಳ್ಳಾರೆ, ಉದ್ಯಮಿಗಳಾದ ಮುಸ್ತಾಫಾ ಕೋಡಿಂಬಾಡಿ, ಖಲೀಲ್ ಬಿ.ಎಚ್., ಅಜಿತ್ ಕೋಡಿಂಬಾಡಿ, ಅನ್ಸಾರ್ ಬಿ.ಎಚ್., ಸಿನಾನ್, ಅಶ್ರಫ್‌ ಷಾ ಮಂತೂರು, ಶರೀಫ್‌ ಕಾವು, ರಜಾಕ್‌ ಹಾಝಿ ಮನಿಲ, ಅರಿಫ್‌ ಕೂರ್ನಡ್ಕ,ಜಬ್ಬಾರ್‌ ಬೈತಡ್ಕ, ಆಶೀಫ್‌ ಮರೀಲ್‌, ರಾಜಿಕ್‌ ಹಾರಾಡಿ, ಜಾಬೀರ್‌ ಬೆಟ್ಟಂಪಾಡಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here