ಬಂಟ ಸಮಾಜದ ವಿದ್ಯಾರ್ಥಿಯ ಇಂಜಿನಿಯರಿಂಗ್ ಕಲಿಕೆಗೆ ಧನಸಹಾಯ

0

ಪುತ್ತೂರು: ಮಂಜಲ್ಪಡ್ಪು ನಿವಾಸಿ ಶಶಿಕಲಾ ರೈಯವರ ಪುತ್ರ ಅಭಿಷೇಕ್ ರೈಯವರ ಇಂಜಿನಿಯರಿಂಗ್ ವಿದ್ಯಾಭ್ಯಾಸದ ಪ್ರಥಮ ವರ್ಷದ ಶೈಕ್ಷಣಿಕ ಶುಲ್ಕವಾಗಿ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ಮುತುವರ್ಜಿಯಿಂದ ರೂ. 75 ಸಾವಿರ ರೂಪಾಯಿ ಸಂಗ್ರಹಿಸಿ ನೀಡಲಾಯಿತು.


ಬಂಟರ ಯಾನೆ ನಾಡವರ ಮಾತೃ ಸಂಘ, ಪುತ್ತೂರು ತಾಲೂಕು ಬಂಟರ ಸಂಘ ಮತ್ತು ಯುವ ಬಂಟರ ಸಂಘದ ಸಹಯೋಗದಲ್ಲಿ ಧನ ಸಹಾಯ ಸಂಗ್ರಹಕ್ಕೆ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮುಂಡಾಳಗುತ್ತು, ಬಂಟ ಸಮಾಜದ ಪ್ರಮುಖರಾದ ಕಡಮಜಲು ಸುಭಾಷ್ ರೈ, ಚನಿಲ ತಿಮ್ಮಪ್ಪ ಶೆಟ್ಟಿ, ಅಬುಧಾಬಿಯ ಉದ್ಯಮಿ ಜಯರಾಮ ರೈ ಮಿತ್ರಂಪಾಡಿ, ಸಾಫ್ಟ್‌ವೇರ್ ಉದ್ಯೋಗಿ ಯಶಸ್ವಿನಿ ರೈರವರುಗಳು ಕೈಜೋಡಿಸಿದರು.


ವಿದ್ಯಾರ್ಥಿ ಅಭಿಷೇಕ್ ರೈಯವರಿಗೆ ಧನಸಹಾಯವನ್ನು ಪುತ್ತೂರು ಬಂಟರ ಭವನದಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾವು ಹೇಮನಾಥ ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೊಟ್ಟು, ಚನಿಲ ತಿಮ್ಮಪ್ಪ ಶೆಟ್ಟಿ, ಶಶಿರಾಜ್ ರೈ ಮುಂಡಾಳಗುತ್ತು, ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಜಯಪ್ರಕಾಶ್ ರೈ ನೂಜಿಬೈಲು, ಭಾಗ್ಯೇಶ್ ರೈ ಕೆಯ್ಯೂರು, ಕೆ.ಸಿ.ಆಶೋಕ್ ಶೆಟ್ಟಿ, ದಿವ್ಯನಾಥ ಶೆಟ್ಟಿ ಕಾವು , ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಹರ್ಷಕುಮಾರ್ ರೈ ಮಾಡಾವು, ರವಿಪ್ರಸಾದ್ ಶೆಟ್ಟಿ ಬನ್ನೂರು, ಭಾಸ್ಕರ್ ರೈರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here