ಜಿ.ಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ವಾರ್ಷಿಕ ಮಹಾಸಭೆ

0

ರೂ.6.99 ಲಕ್ಷ ನಿವ್ವಳ ಲಾಭ | ಶೇ.10 ಡಿವಿಡೆಂಡ್

ಪುತ್ತೂರು: ಬಿಇಒ ಆಫೀಸ್ ಬಳಿಯ ಸಾರಥಿ ಭವನದಲ್ಲಿ ಕಾರ್ಯಾಚರಿಸುತ್ತಿರುವ ಜಿ.ಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಇದರ 2022-23ನೇ ಸಾಲಿನ ನಾಲ್ಕನೇ ವಾರ್ಷಿಕ ಮಹಾಸಭೆಯು ಸೆ.17 ರಂದು ಬೆಳಿಗ್ಗೆ ಹೋಟೆಲ್ ಸಂತೃಪ್ತಿ ಎದುರಿನ ಸಣ್ಣ ಕೈಗಾರಿಕಾ ಸಹಕಾರಿ ಕಟ್ಟಡದ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಇ.ನಾರಾಯಣ ಹೇರಳೆರವರ ಅಧ್ಯಕ್ಷತೆಯಲ್ಲಿ ಜರಗಿತು.


ಸಂಘದ ಅಧ್ಯಕ್ಷ ಇ.ನಾರಾಯಣ ಹೇರಳೆರವರು ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸಂಘವು ವರದಿ ಸಾಲಿನಲ್ಲಿ ರೂ.s6,99,001 ಲಾಭಾಂಶ ಪಡೆದಿದ್ದು ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು. ಸಂಸ್ಥೆಯು ವರದಿ ವರ್ಷದಲ್ಲಿ ರೂ.11,80,11,668 ವಹಿವಾಟು ಮಾಡಿರುತ್ತದೆ. ಹಾಗೆಯೇ ಸಂಸ್ಥೆಯ ಸದಸ್ಯತ್ವದಲ್ಲಿ, ಠೇವಣಾತಿ ಸ್ವೀಕಾರದಲ್ಲಿ ಹಾಗೂ ಸಹಕಾರಿಯ ದುಡಿಯುವ ಬಂಡವಾಳವನ್ನು ಹೆಚ್ಚಿಸುವಲ್ಲಿ ಸಂಘವು ಉತ್ತಮ ಸಾಧನೆ ಮಾಡಿರುತ್ತದೆ. ವರದಿ ವರ್ಷದಲ್ಲಿ 492 ಮಂದಿ ‘ಎ’ ಸದಸ್ಯತ್ವ ಹೊಂದಿದ್ದು 29 ಜನ ನಾಮಮಾತ್ರ ಸದಸ್ಯತ್ವ ಹೊಂದಿರುತ್ತಾರೆ. ವರದಿ ವರ್ಷದಲ್ಲಿ ಹೊಸದಾಗಿ 83 ‘ಎ ಕ್ಲಾಸ್’ ಸದಸ್ಯತ್ವ ಹಾಗೂ ಆರು ಜನ ಸಾಮಾನ್ಯ ಸದಸ್ಯತ್ವ ಹೊಂದಿರುತ್ತಾರೆ. ನಾಲ್ಕು ಜನ ಸದಸ್ಯತ್ವ ತ್ಯಜಿಸಿರುತ್ತಾರೆ. ವರದಿ ವರ್ಷದಲ್ಲಿ ರೂ.5,25,000 ‘ಎ ಕ್ಲಾಸ್’ ಹಾಗೂ 2900 ‘ಬಿ ಕ್ಲಾಸ್’ ಪಾಲು ಬಂಡವಾಳ ಇರುತ್ತದೆ ಮಾತ್ರವಲ್ಲ ಸಂಘದ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಅಧ್ಯಕ್ಷ ಇ.ನಾರಾಯಣ ಹೇರಳೆಯವರು ಹೇಳಿದರು.


ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಮೋಹನ ಹೊಳ್ಳರವರು ಸಭೆಯ ನೋಟಿಸನ್ನು ಮತ್ತು ಹಿಂದಿನ ಸಭೆಯ ನಡಾವಳಿಯನ್ನು ಓದಿ ದಾಖಲಿಸಿದರು. ಲೆಕ್ಕಪರಿಶೋಧಕರ ವರದಿಯಲ್ಲಿ ನಮೂದಿಸಿದ ನ್ಯೂನತೆಗಳನ್ನು ಮತ್ತು ಅನುಪಾಲನಾ ವರದಿಯನ್ನು ಸಭೆಗೆ ತಿಳಿಸಿದರು ಮತ್ತು 2022-23ನೇ ಸಾಲಿನ ಲೆಕ್ಕಪತ್ರಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. ಸಂಘದ ಸದಸ್ಯೆ ಆಶಾ ಮಯ್ಯರವರು 2022-23ನೇ ಸಾಲಿನ ಆಡಳಿತ ಮಂಡಳಿ ವರದಿ ಮತ್ತತು ಅಂಕಿ-ಅಂಶಗಳನ್ನು ಸಭೆಗೆ ತಿಳಿಸಿದರು. ಸಂಘದ ಬೈಲಾ ತಿದ್ದುಪಡಿಯ ವಿವರವನ್ನು ನಿರ್ದೇಶಕರಾದ ಇ.ಗೋಪಾಲಕೃಷ್ಣ ಹೇರಳೆಯವರು ವಿವರಿಸಿದರು. ಈ ಸಂದರ್ಭದಲ್ಲಿ 2023-24ನೇ ಸಾಲಿನ ಲೆಕ್ಕಪರಿಶೋಧಕನ್ನು ಸದಸ್ಯರ ಒಪ್ಪಿಗೆಯ ಮೇರೆಗೆ ನಡೆಸಲಾಯಿತು.


ಸುಧಾ ಹೇರಳೆ, ರೇಖಾ ಹೇರಳೆ, ಗೀತಾ ಹೊಳ್ಳರವರು ಪ್ರಾರ್ಥಿಸಿದರು. ನಿರ್ದೇಶಕ ಗೋಪಾಲಕೃಷ್ಣ ಹೇರಳೆಯವರು ಸ್ವಾಗತಿಸಿ, ನಿರ್ದೇಶಕ ಶಿವಪ್ರಸಾದ್ ವಿ. ವಂದಿಸಿದರು. ಸಂಘದ ನಿರ್ದೇಶಕರಾದ ವಿ.ರಾಮಚಂದ್ರ ರಾವ್, ಡಿ.ಶಿವಪ್ರಸಾದ, ಬಿ.ಸದಾಶಿವ ಹೊಳ್ಳ, ಎಂ.ವೆಂಕಟೇಶ್, ಇಂದಿರಾ ವಿ.ರಾವ್, ಸುಧಾ ಎನ್.ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಶಾ ಮಯ್ಯರವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here