ಬೊಳುವಾರು ವಿಶ್ವಕರ್ಮ ಸಭಾ ಭವನದಲ್ಲಿ ಜಯಂತಿ ಹೆಗ್ಡೆಯವರ ನುಡಿನಮನ ಕಾರ್ಯಕ್ರಮ

0

ಪುತ್ತೂರು : ಇಲ್ಲಿನ ಪುರುಷರಕಟ್ಟೆ ಜೈನ ಬಸದಿ ಬಳಿಯ ಸಿಂಚನ ನಿಲಯ ನಿವಾಸಿ , ವೃತ್ತಿಯಲ್ಲಿ ಚಾಲಕರಾಗಿದ್ದ ಭವಾನಿಶಂಕರ ಹೆಗ್ಡೆ ಯವರ ಪತ್ನಿ ಬಿ.ಜಯಂತಿ ಹೆಗ್ಡೆ ಯವರಿಗೆ ಶ್ರದ್ಧಾಂಜಲಿ ಅರ್ಪಣೆ ಕಾರ್ಯ ಸೆ.21 ರಂದು ಬೊಳುವಾರು ವಿಶ್ವಕರ್ಮ ಸಭಾಭವನ ಇದರ ಸಭಾಂಗಣದಲ್ಲಿ ನಡೆಯಿತು.


ಪೊಲೀಸ್ ಇಲಾಖೆಯ ನಿವೃತ್ತ ಸಹಾಯಕ ಉಪ ನಿರೀಕ್ಷಕ ರಘರಾಮ ಹೆಗ್ಡೆ ಉರ್ಲಾಂಡಿ ಮೃತರ ಗುಣಗಾನ ಮಾಡಿ , ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು . ಈ ವೇಳೆ ತ್ಯಾಗರಾಜ್ ಹೆಗ್ಡೆ ನಂದಿಲ ,ನಿವೃತ್ತ ಬ್ಯಾಂಕ್ ಉದ್ಯೋಗಿ ಗಂಗಾಧರ್ , ಅಚ್ಯುತ ನಾಯಕ್ ಪರ್ಲಡ್ಕ , ಪೊಲೀಸ್ ಇಲಾಖೆಯ ನಿವೃತ್ತ ಸಹಾಯಕ ಉಪ ನಿರೀಕ್ಷಕ ಪುರುಷೋತ್ತಮ ಹೆಗ್ಡೆ , ಶ್ರೀ ರಾಮಕೃಷ್ಣ ಹೆಣ್ಮಕ್ಕಳ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಧರ್ ರೈ , ಪಾಂಡುರಂಗ ಹೆಗ್ಡೆ , ಅರಣ್ಯ ಇಲಾಖೆಯ ಉದ್ಯೋಗಿ ರೋಹಿತ್ , ಪತಿ ಭವಾನಿ ಶಂಕರ ಹೆಗ್ಡೆ ,
ಪುತ್ರರಾದ ತಾರನಾಥ ಹೆಗ್ಡೆ ಮತ್ತುನಿವೃತ್ತ ಯೋಧ ಹಾಗೂ ಪ್ರಸ್ತುತ ಕೆನರಾ ಬ್ಯಾಂಕ್ ಉದ್ಯೋಗಿಯಾಗಿರುವ ಶಿವಾನಂದ ಹೆಗ್ಡೆ , ಸೊಸೆಯಂದಿರಾದ ರಾಜೇಶ್ವರಿ ತಾರನಾಥ ಹಾಗೂ ನಯನ ಶಿವಾನಂದ ಪುತ್ರಿಯರಾದ ವಿನುತಾ ಸುರೇಶ್ ಹೆಗ್ಡೆ , ಪ್ರಮೀಳಾ ಶ್ರೀಧರ್ ಹೆಗ್ಡೆ, ಶೋಭಾ ಅಶೋಕ್ ಕುಂಬ್ಳೆ ಮತ್ತು ರೇಣುಕಾ ಬಾಲಚಂದ್ರ ರಾವ್ ಹಾಗೂ ಅಳಿಯಂದಿರಾದ ಸುರೇಶ್ ಹೆಗ್ಡೆ ,ಶ್ರೀಧರ್ ಹೆಗ್ಡೆ ,ಅಶೋಕ್ ಕುಂಬ್ಳೆ ಮತ್ತು ಬಾಲಚಂದ್ರ ರಾವ್ , ಮೊಮ್ಮಕ್ಕಳಾದ ನಂದಿನಿ ವಿನಾಯಕ್,ಕು. ದುರ್ಗಾಶ್ರೀ ,ಚಿನ್ಮಯ ಎಸ್ ,ಪೂಜಾ ರತೀಶ್ ಕುಂಬ್ಳೆ ,ಕು. ಸುಪ್ರೀತಾ ,ದೇವಾನಂದ ಹೆಗ್ಡೆ ,ಕು. ಆಶ್ರಯ ಪಿ. ,ಕು. ಸಿಂಚನ ,ಪವನ್ ಕುಮಾರ್ ,ಆರ್ಯ ಬಿ ರಾವ್ ,ಮರಿ ಮೊಮ್ಮಕ್ಕಳಾದಕು.ಲವಿತ್ರಾ ದಾಕ್ಷಾಯಿಣಿ ವಿ. ಹಾಗೂ
ಮಾ. ಸಮರ್ಥ್ ಹಾಜರಿದ್ದರು.

LEAVE A REPLY

Please enter your comment!
Please enter your name here