ಬಿರುಮಲೆಬೆಟ್ಟ ಅಭಿವೃದ್ಧಿ ಯೋಜನೆಯ ಕಾರ್ಯಕಾರಿ ಸಮಿತಿ ಸಭೆ

0

ಪುತ್ತೂರು: ಬಿರುಮಲೆಬೆಟ್ಟ ಅಭಿವೃದ್ಧಿ ಯೋಜನೆಯ ಕಾರ್ಯಕಾರಿ ಸಮಿತಿ ಸಭೆಯು ಸಮಿತಿ ಸದಸ್ಯ ನಿತಿನ್ ಪಕ್ಕಳರವರ ಗುಲಾಬಿ ಸದನದಲ್ಲಿ ಜರಗಿತು.ಬಿರುಮಲೆಬೆಟ್ಟ ಅಭಿವೃದ್ಧಿ ಯೋಜನಾ ಸಮಿತಿಯ ಅಧ್ಯಕ್ಷ ಎ.ಜಗಜ್ಜೀವನ್ ದಾಸ್ ರೈಯವರು ಸ್ವಾಗತಿಸಿ ಸಭೆಯ ಉದ್ಧೇಶಗಳನ್ನು ಪ್ರಸ್ತಾಪಿಸಿದರು. ಇತ್ತೀಚೆಗೆ ನಡೆದ ಬಿರುಮಲೆ ನಡಿಗೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಸಮಿತಿಯಲ್ಲಿ ಹಲವಾರು ವರ್ಷಗಳಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಎಂ.ಸುಬ್ರಾಯ ಅಮ್ಮಣ್ಣಾಯರವರು ಕಾರ್ಯದರ್ಶಿ ಸ್ಥಾನಕ್ಕೆ ತಮ್ಮ ವೈಯಕ್ತಿಕ ಅನಾನುಕೂಲತೆಯಿಂದಾಗಿ ನೀಡಿದ ರಾಜೀನಾಮೆ ಪತ್ರದ ಅಂಗೀಕಾರ, ಗಾಂಧಿಮಂಟಪದ ಅಭಿವೃದ್ಧಿ ಕುರಿತಾದ ವಿಚಾರಗಳು ಮುಂತಾದ ಹಲವಾರು ವಿಚಾರಗಳನ್ನು ಚರ್ಚಿಸಲಾಯಿತು.
ಸಭೆಯಲ್ಲಿ ನಿತಿನ್ ಪಕ್ಕಳ, ಸಂತೋಷ್ ಕುಮಾರ್ ಶೆಟ್ಟಿ, ಸುಬ್ರಾಯ ಅಮ್ಮಣ್ಣಾಯ, ಶಾಂತಕಿಮಾರ್, ಡಾ.ಸತ್ಯವತಿ ಆಳ್ವ, ಇಂದಿರಾ ಆಚಾರ್ ರವರು ಉಪಸ್ಥಿತರಿದ್ದರು. ಸದಸ್ಯ ಸೂರ್ಯನಾಥ ಆಳ್ವ ವಂದಿಸಿದರು.

LEAVE A REPLY

Please enter your comment!
Please enter your name here