ಮುಲಾರ್ – ದಂಡನ ಕುಕ್ಕು ರಸ್ತೆ ಉದ್ಘಾಟನೆ

0

ಈಗ ನಡೆಯುವ ಎಲ್ಲಾ ಕಾಮಗಾರಿಗಳೂ ಕಾಂಗ್ರೆಸ್ ಸರಕಾರದ ಯೋಜನೆ: ಅಶೋಕ್ ರೈ
ಪುತ್ತೂರು: ಈಗ ನಡೆಯುವ ಎಲ್ಲಾ ಕಾಮಗಾರಿಗಳೂ ರಾಜ್ಯ ಕಾಂಗ್ರೆಸ್ ಸರಕಾರದ ಯೋಜನೆಯಾಗಿದೆ, ಕಳೆದ ಸರಕಾರ ಇರುವಾಗ ಗುದ್ದಲಿ ಪೂಜೆಯಾಗಿದೆಯಾದರೂ ಕಾಮಗಾರಿಗೆ ಅನುದಾನ ನೀಡಿದ್ದು ಕಾಂಗ್ರೆಸ್ ಸರಕಾರವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಮುಂಡೂರು ಗ್ರಾಮದ ದಂಡನ ಕುಕ್ಕು ರಸ್ತೆ ಉದ್ಘಾಟಿಸಿ ಮಾತನಾಡಿದರು.
ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಅನೇಕ ಕಡೆ ಗುದ್ದಲಿ ಪೂಜೆ ಜೋರಾಗಿಯೇ ನಡೆದಿತ್ತು. ಅನುದಾನ ನೀಡಿರಲಿಲ್ಲ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರ ಕಳೆದುಕೊಂಡ ಬಳಿಕ ಇಲ್ಲಿ ನಡೆಯುವ ಎಲ್ಲಾ ಕಾಮಗಾರಿಗಳಿಗೂ ರಾಜ್ಯದ ಕಾಂಗ್ರೆಸ್ ಸರಕಾರ ಅನುದಾನ ನೀಡುತ್ತಿದೆ ಎಂದು ಹೇಳಿದರು. ಎಲ್ಲಿ ಕಾಮಗಾರಿ ನಡೆದರೂ ಕಳಪೆಯಾಗದಂತೆ ಜನರೇ ನೋಡಿಕೊಳ್ಳಬೇಕು, ಲಂಚ,ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ. ಕಾಮಗಾರಿ ಕಳಪೆ ಮಾಡಿದರೆ ಸುಮ್ಮನೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ದಿಯಾಗಲಿದೆ ಎಂದು ಶಾಸಕರು ಹೇಳಿದರು. ವೇದಿಕೆಯಲ್ಲಿ ಕಾವು ಹೇಮನಾಥ ಶೆಟ್ಟಿ,ಯಾಕೂಬ್ ಮುಲಾರ್,ಸುರೇಶ್ ಪೂಜಾರಿ ಸಹಿತ ಅನೇಕ‌ ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here