ಐತ್ತೂರು ಗ್ರಾ.ಪಂ ಜಮಾಬಂದಿ ಸಭೆ

0

ಕಡಬ: ಐತ್ತೂರು ಗ್ರಾಮ ಪಂಚಾಯತಿಯಲ್ಲಿ 2022-23 ನೇ ಸಾಲಿನ ಜಮಾಬಂದಿ ಸಭೆ ಸೆ.26ರಂದು ನಡೆಯಿತು . ಜಮಾಬಂದಿ ಅಧಿಕಾರಿಯಾಗಿ ಮಂಜುಳಾ ಶ್ರೀ ಶೆಣೈ ಸಹಾಯಕ ನಿರ್ದೇಶಕರು ಮೀನುಗಾರಿಕಾ ಇಲಾಖೆ ಪುತ್ತೂರು, ಇವರು ಆಗಮಿಸಿ 2022-23 ಸಾಲಿನಲ್ಲಿ ನಿರ್ವಹಿಸಿದ ಕಾಮಗಾರಿಗಳ ಪರಿಶೀಲನೆ ಹಾಗೂ ಲೆಕ್ಕಪತ್ರಗಳ ಪರಿಶೀಲನೆ ನಡೆಸಿದರು‌. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತ.ಕೆ, ಗ್ರಾಪಂ ಅಧ್ಯಕ್ಷೆ ವತ್ಸಲಾ, ಉಪಾಧ್ಯಕ್ಷೆ ಜಯಲಕ್ಷ್ಮಿ ಉಪಸ್ಥಿತರಿದ್ದರು.ಸಭೆಯಲ್ಲಿ ಗ್ರಾ.ಪಂ ಸದಸ್ಯರಾದ‌ ಮನಮೋಹನ್ ಗೋಳ್ಯಾಡಿ, ಈರೇಶ್, ನಾಗೇಶ್, ಪ್ರೇಮ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here