ಪುತ್ತೂರಿನ ಪ್ರತಿಭೆಯಿಂದ ಹೊರ ಹೊಮ್ಮಲಿರುವ ಕನ್ನಡ ಸಿನಿಮಾ: ಪ್ರೋಡಕ್ಷನ್ ನಂ.3 – ಪೋಸ್ಟರ್ ಬಿಡುಗಡೆ

0

ಪುತ್ತೂರು: ಪುತ್ತೂರಿನ ಪ್ರತಿಭೆಯಾಗಿರುವ ಬೊಳುವಾರು ಬೈಪಾಸ್ ನಿವಾಸಿ ಪ್ರಜ್ವಲ್ ಕೆ ನಿರ್ದೇಶನದ ಹಾಗು ತವೀಶ್ ಎಂಟರ್‌ಪ್ರೈಸಸ್ ನಿರ್ಮಾಣದ ಪ್ರೋಡಕ್ಷನ್ ನಂ. 3 ಎಂಬ ತಾತ್ಕಾಲಿಕವಾಗಿ ಇಟ್ಟಿರುವ ಟೈಟಲ್ ಮೂಲಕ ಚಿತ್ರದ ಕಾನ್ಸೆಪ್ಟ್ ಪೋಸ್ಟರ್ ಇತ್ತೀಚೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯುತ್ತಿದ್ದ ಗಣೇಶೋತ್ಸವದಲ್ಲಿ ಬಿಡುಗಡೆಗೊಳಿಸಲಾಯಿತು.


ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ಸಹಜ್ ರೈ ಬಳಜ್ಜ, ರಾಜೇಶ್ ಬನ್ನೂರು, ಅಜಿತ್ ರೈ ಹೊಸಮನೆ, ನೀಲಂತ್, ದಿನೇಶ್ ಪಂಜಿಗ ಸಹಿತ ಹಲವಾರು ಮಂದಿ ಚಿತ್ರದ ಕಾನ್ಸ್‌ಪ್ಟ್ ಪೋಸ್ಟರ್ ಬಿಡುಗಡೆಗೊಳಿಸಿದರು. ಪುತ್ತೂರು ಬೊಳುವಾರು ಬೈಪಾಸ್ ನಿವಾಸಿ ವಸುಂದರ್ ಮತ್ತು ಚಂಚಲಾಕ್ಷಿ ಅವರ ಪುತ್ರ ಪ್ರಜ್ವಲ್ ಅವರು ಸಂತ ಪಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.

ಥ್ರಿಲ್ಲರ್ ಕಥೆ
ಚಿತ್ರದ ನಿರ್ದೇಶಕ ಪ್ರಜ್ವಲ್ ಅವರ ಈ ಚಿತ್ರ ಎಕ್ಸ್ಪರಿಮೆಂಟ್ ರೀತಿಯಲ್ಲಿ ಸಿನಿಮಾದ ಸಬ್ಜೆಕ್ಟ್ ಇದ್ದು ಇದೊಂದು ಥ್ರಿಲ್ಲರ್ ಕಥೆಯಾಗಲಿದೆ. ಈ ಹಿಂದೆ ಪ್ರಜ್ವಲ್ ಕೆ. ಅವರು ಹಲವಾರು ಶಾರ್ಟ್ ಫಿಲಂ ಹಾಗು ಆಲ್ಬಂ ಸಾಂಗ್ ಜೊತೆಗೆ ಸಹಾಯ ನಿರ್ದೇಶಕರಾಗಿಯೂ ದುಡಿದ ಅನುಭವಿದೆ. ಇವರ ಚಿತ್ರಗಳಿಗೆ ಇಂಟರ್‌ನ್ಯಾಷನಲ್ ಅವಾರ್ಡ್ ಲಭಿಸಿದೆ. ಬೋಜರಾಮ್ ಎಂ.ಬಿ.ಬಿ.ಎಸ್ ಸಹಿತ ಕೆಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದು, ಇದೀಗ ಥ್ರಿಲ್ಲರ್ ಕಥೆಯಲ್ಲಿ ಚಿತ್ರ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here