ಕುಂಬ್ರ -ಮೈದಾನಿಮೂಲೆ ಮಸೀದಿಯಲ್ಲಿ  ಈದ್ ಮೀಲಾದ್ ಆಚರಣೆ

0

ಪುತ್ತೂರು: ಪೈಗಂಬರ್ ಮುಹಮ್ಮದ್  (ಸ) ರವರ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಈದ್ ಮೀಲಾದ್  ಕಾರ್ಯಕ್ರಮ ಮಸೀದಿಯ ಅಧ್ಯಕ್ಷರಾದ ಹಾಜಿ ಯೂಸುಫ್ ಕೈಕಾರರವರ ಅಧ್ಯಕ್ಷತೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಮಸೀದಿಯ ಗೌರವಾಧ್ಯಕ್ಷರಾದ ಅಸ್ಸಯ್ಯದ್ ಮುಝ್ಝಮ್ಮಿಲ್ ತಂಙಳ್ ರವರ ದುಆದೊಂದಿಗೆ ಆರಂಭವಾದ ಸಭೆಯನ್ನು ಸ್ಥಳೀಯ ಮದರಸ ಮುಖ್ಯೋದ್ಯಾಪಕರಾದ ಉಮರುಲ್ ಫಾರೂಕ್ ಮದನಿ ಉದ್ಘಾಟಿಸಿದರು.ಮಸೀದಿಯ ಉಪಾಧ್ಯಕ್ಷರಾದ ರಫೀಕ್ ಅಲ್ ರಾಯ ಆಶಂಸ ಪ್ರಭಾಷಣ ನಡೆಸಿದರು.ಸ್ಥಳೀಯ ಖತೀಬ್ ಅಬ್ದುರ್ರಝಾಕ್ ಖಾಸಿಮಿ ಮುಖ್ಯ ಪ್ರಭಾಷಣ ನಡೆಸಿದರು.ಕೋಶಾಧಿಕಾರಿ ಅಶ್ರಫ್ ಉಜಿರೋಡಿ,ಉಪಾಧ್ಯಕ್ಷರಾದ ಕೆಪಿ ಮುಹಮ್ಮದ್,ಯಂಗ್‌ಮೆನ್ಸ್ ಅಧ್ಯಕ್ಷರಾದ ಹಾರೀಸ್,ಸಹ ಅದ್ಯಾಪಕರಾದ ಅಬ್ದುರ್ರಹ್ಮಾನ್ ಮಳ್‌ಹರಿ ಉಪಸ್ಥಿತರಿದ್ದರು. ಈದ್ ಮೀಲಾದ್ ಕಾರ್ಯಕ್ರಮ ಪ್ರಯುಕ್ತ ಮದರಸ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಮಸೀದಿಯ ಪ್ರಧಾನ ಕಾರ್ಯದರ್ಶಿ ಯೂಸುಫ್ ಮೈದಾನಿಮೂಲೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here