ಸರ್ವೆ: ಕಾರು ಅಪಘಾತ ಪ್ರಯಾಣಿಕರಿಗೆ ಗಾಯ

0

ಪುತ್ತೂರು:ನಾಯಿಯೊಂದು ಏಕಾಏಕಿಯಾಗಿ ರಸ್ತೆಗಡ್ಡಲಾಗಿ ಬಂದ ಪರಿಣಾಮ ದಿಢೀರ್ ಬ್ರೇಕ್ ಹಾಕಿದ ವೇಳೆ ಕಾರು ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿ ಅದರಲ್ಲಿದ್ದವರು ಗಾಯಗೊಂಡಿರುವ ಘಟನೆ ಸರ್ವೆ ಭಕ್ತಕೋಡಿ ಎಂಬಲ್ಲಿ ನಡೆದಿದೆ.


ಕಾಟುಕುಕ್ಕೆ ನಿವಾಸಿಯಾದ ಶ್ರೀಮತಿ ಪರಮೇಶ್ವರಿ ಕೆ ಎಂಬವರು ಈ ಕುರಿತು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸೆ.28ರಂದು ಬೆಳಿಗ್ಗೆ ತನ್ನ ಮಗ ಬಾಲಕೃಷ್ಣ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಲ್ಲಿ ತಾನು,ಪತಿ ಬಾಲಸುಬ್ರಹ್ಮಣ್ಯ, ಮೊಮ್ಮಕ್ಕಳಾದ ಭಾವನಾ ಮತ್ತು ಅನಿರುದ್ದ್ ಎಂಬವರುಗಳು ಸಹ ಪ್ರಯಾಣಿಕರಾಗಿ ಹೋಗುತ್ತಿದ್ದ ಸಂದರ್ಭ ಸರ್ವೆ ಗ್ರಾಮದ ಭಕ್ತಕೋಡಿ ಎಂಬಲ್ಲಿ ನಾಯಿಯೊಂದು ಏಕಾ ಏಕಿ ರಸ್ತೆಗೆ ಅಡ್ಡಲಾಗಿ ಬಂದು, ಅಪಘಾತವಾಗುವುದನ್ನು ತಪ್ಪಿಸುವ ಸಲುವಾಗಿ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ, ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ.ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಗಾಯಗಳಾಗಿರುತ್ತದೆ.ಕೂಡಲೇ ಸಾರ್ವಜನಿಕರು ಗಾಯಾಳುಗಳನ್ನು ಆಟೋರಿಕ್ಷಾವೊಂದರಲ್ಲಿ ಪುತ್ತೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here