ಸುಬ್ರಹ್ಮಣ್ಯ ವಲಯದ ಉಪವಲಯಾರಣ್ಯಾಧಿಕಾರಿ ಸಂತೋಷ್ ಶಿವಪ್ಪ ದಮ್ಮಸೂರು ಅವರಿಗೆ ಮುಖ್ಯಮಂತ್ರಿ ಪದಕ

0

ಪುತ್ತೂರು:ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ರಾಜ್ಯ ಸರಕಾರ ನೀಡುವ ಮುಖ್ಯಮಂತ್ರಿ ಪದಕ ಕಡಬ ತಾಲೂಕಿನ ಸುಬ್ರಹ್ಮಣ್ಯ ವಲಯದ ಉಪವಲಯಾರಣ್ಯಾಧಿಕಾರಿ ಸಂತೋಷ್ ಶಿವಪ್ಪ ದಮ್ಮಸೂರು ಅವರಿಗೆ ಪ್ರಧಾನ ಮಾಡಲಾಗಿದೆ.
ಬೆಂಗಳೂರಿನ ವಿಧಾನ ಸೌಧದ ಬ್ಯಾಕೆಂಟ್ ಹಾಲ್ ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪದಕ ಪ್ರಧಾನ ಮಾಡಲಾಯಿತು. ಸಂತೋಷ್ ಅವರು ಸವದತ್ತಿ ತಾಲೂಕಿನ ಹಾರುಗೊಪ್ಪ ಗ್ರಾಮದವರು. 2009ರಲ್ಲಿ ಉಪ್ಪಿನಂಗಡಿ ವಲಯದ ಶಿರಾಡಿಯಲ್ಲಿ ಅರಣ್ಯ ರಕ್ಷಕರಾಗಿ ಕೆಲಸಕ್ಕೆ ಸೇರಿದ್ದ ಅವರು 2013ರಲ್ಲಿ ಪಂಜ ವಲಯಕ್ಕೆ ವರ್ಗಾವಣೆಗೊಂಡರು. 2000 ರಲ್ಲಿ ಉಪ ಅರಣ್ಯಾಧಿಕಾರಿಯಾಗಿ ಭಡ್ತಗೊಂಡು 2021ರಲ್ಲಿ ಸುಬ್ರಹ್ಮಣ್ಯ ವಲಯದ ನೆಟ್ಟಣದ ಕೇಂದ್ರೀಯ ಮರಗಳ ಸಂಗ್ರಹಾಲಯದಲ್ಲಿ ಕರ್ತವ್ಯದಲ್ಲಿದ್ದಾರೆ. ಕರ್ತವ್ಯ ಸಮಯದಲ್ಲಿ ಜಾತಿವಾರು ಸಸಿಗಳ ಸಂಖ್ಯೆಯಲ್ಲಿ ಕೆಲಜಾತಿಯ ಸಸಿಗಳು ವಿರಳವಾಗಿರುವುದನ್ನು ಗಮನಿಸಿ ಅವುಗಳ ಸಂದ್ರಾತೆಯನ್ನು ಹೆಚ್ಚಿಸುವ ಸಲುವಾಗಿ ಅವುಗಳ ಬೀಜಗಳನ್ನು ಹಾಗೂ ಕಾಡು ಸಸಿಗಳನ್ನು ಸ್ವ ಇಚ್ಛೆಯಿಂದ ತಂದು ಸಸ್ಯ ಕ್ಷೇತ್ರದಲ್ಲಿ ಪೋಷಿಸಿ ನಂತರ ಅಭಿವೃದ್ಧಿ ಪಡಿಸಿದ ನೆಡುತೋಪುಗಳನ್ನು ನೆಟ್ಟು ಪೋಷಣೆ ಮಾಡಿ ಸದರಿ ಜಾತಿಯ ಸಸಿಗಳ ಸಂಶೋಧನೆ ಮತ್ತು ಸಂಖ್ಯೆ ಹೆಚ್ಚಿಸುವಲ್ಲಿ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಪದಕ ಆಯ್ಕೆಗೆ ಪರಿಗಣಿಸಲಾಗಿದೆ.

LEAVE A REPLY

Please enter your comment!
Please enter your name here