ಕೆದಂಬಾಡಿ ಗ್ರಾಪಂನಿಂದ ಇದ್ಪಾಡಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ 

0

ಪುತ್ತೂರು -ಸ್ವಚ್ಛತೆ ಬಗ್ಗೆ ನಾಗರಿಕರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಸ್ವಚ್ಛತಾ ಹಿ ಸೇವಾ ಎಂಬ ಕಾರ್ಯಕ್ರಮದ ಅಡಿಯಲ್ಲಿ ಕೆದಂಬಾಡಿ ಗ್ರಾಪಂ ನಿಂದ ಅ.1ರಂದು ಇದ್ಪಾಡಿ ಆಟದ ಮೈದಾನದಲ್ಲಿ ಸ್ವಚ್ಛತಾ ಅಭಿಯನ ನಡೆಯಿತು.

ಈ ಕಾರ್ಯಕ್ರಮ ದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರತನ್ ರೈ ಕುಂಬ್ರ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿಕೆ, ಹೇಮಲತಾ ಕಾರ್ಯದರ್ಶಿ ಆಸರೆ ಸಂಜೀವಿನಿ ಒಕ್ಕೂಟ ಕೆದಂಬಾಡಿ , ಶ್ರೀ ಶಿರಾಡಿ ಭಕ್ತ ವೃಂದ ಇದ್ಪಾಡಿ, ಗ್ರೀನ್ ಸ್ಟಾರ್ ಗಟ್ಟಮನೆ.ಯುವರಂಗ ಕೆದಂಬಾಡಿ. ಶ್ರೀ ಶಿರಾಡಿ ಸಂಜೀವಿನಿ ಸ್ವಸಹಾಯ ಸಂಘ,  ಗಳ ಅಧ್ಯಕ್ಷರು ಗಳು, ಹಾಗೂ ಸರ್ವ ಸದಸ್ಯರು,ಅಂಗನವಾಡಿ ಸಹಾಯಕಿ ಇದ್ಪಾಡಿ, ಪಂಚಾಯತ್ ಸಿಬ್ಬಂದಿಗಳು ,ಸಂಜೀವಿನಿ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ  ಪೂರ್ಣಿಮಾ ಹಾಗೂ ಘನ ತ್ಯಾಜ್ಯ ವಾಹನ ಚಾಲಕರು, ಹಾಗೂ ಸಹಾಯಕರು,ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here