ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ವಿವಿಧ ಶಾಲೆಗಳಿಗೆ ಗಿಡಗಳ ಸಂರಕ್ಷಣೆಗಾಗಿ ಟ್ರೀ ಗಾರ್ಡ್ ಗಳ ಹಸ್ತಾಂತರ

0

ಸುಬ್ರಹ್ಮಣ್ಯ : ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ವಿವಿಧ ಶಾಲೆಗಳಿಗೆ ಗಿಡಗಳ ಸಂರಕ್ಷಣೆಗಾಗಿ ಟ್ರೀ ಗಾರ್ಡ್ ಗಳ ಹಸ್ತಾಂತರ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು, ವಿವಿಧ ಶಾಲೆಗಳಿಗೆ ಟ್ರೀ ಗಾರ್ಡ್‌ ಗಳ ಹಸ್ತಾಂತರಿಸಿ ಮಾತನಾಡಿ, ಪರಿಸರ ಸಂರಕ್ಷಣೆ, ಪರಸರ ಸ್ವಚ್ಛತೆ ಕೇವಲ ಒಂದು ದಿನದ ಕೆಲಸ ಆಗಬಾರದು. ನಾವು ನಾಟಿ ಮಾಡಿದ ಗಿಡಗಳನ್ನು ಸಂರಕ್ಷಿಸಿ ಪೋಷಿಸಿದಲ್ಲಿ ಮಾತ್ರವೇ ನಿಜವಾದ ಪರಿಸರ ಸಂರಕ್ಷಣೆ ಆಗಲಿದೆ. ದೇವಸ್ಥಾನದ ವತಿಯಿಂದ ಗಿಡಗಳ ಸಂರಕ್ಷಣೆಗೆ ಟ್ರೀ ಗಾರ್ಡ್ ನೀಡುತ್ತಿರುವುದು ಶ್ಲಾಘನೀಯ ಎಂದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಯ, ಸದಸ್ಯರಾದ ಎ.ಬಿ. ಮನೋಹರ ರೈ, ಲೋಕೇಶ್ ಮುಂಡೋಕಜೆ, ಪ್ರಸನ್ನ ದರ್ಬೆ, ಶೋಭಾ ಗಿರಿಧರ, ಚಂದ್ರಶೇಖರ ಮರ್ದಾಳ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here