ಶಿರಾಡಿ: ನಿವೃತ್ತ ಸಿಡಿಪಿಒ ಭಾರತಿಯವರಿಗೆ ಸನ್ಮಾನ

0

ನೆಲ್ಯಾಡಿ: ಸೆ.30ರಂದು ನಿವೃತ್ತರಾದ ಪುತ್ತೂರು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮತ್ತು ವಿಕಲ ಚೇತನರ ನೋಡೆಲ್ ಅಧಿಕಾರಿಯೂ ಆದ ಭಾರತಿ ಜೆ.,ಅವರಿಗೆ ಶಿರಾಡಿ ಗ್ರಾ.ಪಂ.ನ ಧರಿತ್ರಿ ಸಂಜೀವಿನಿ, ಸ್ತ್ರೀಶಕ್ತಿ ಸಂಘ, ವಿಕಲಚೇತನರ ಪುನರ್ವಸತಿ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರ ವತಿಯಿಂದ ಸನ್ಮಾನ ಕಾರ್ಯಕ್ರಮ ಅ.3ರಂದು ಶಿರಾಡಿ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು.


ಶಿರಾಡಿ ಗ್ರಾ.ಪಂ.ಅಧ್ಯಕ್ಷ ಕಾರ್ತಿಕೇಯನ್ ಉದ್ಘಾಟಿಸಿ, ಶುಭ ಹಾರೈಸಿದರು. ಧರಿತ್ರಿ ಸಂಜೀವಿನಿ ಅಧ್ಯಕ್ಷೆ ಮೇರಿ ಜೋಸೆಫ್‌ರವರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿದ್ದ ಶಿರಾಡಿ ಗ್ರಾ.ಪಂ.ಉಪಾಧ್ಯಕ್ಷೆ ವಿನಿತ ತಂಗಚ್ಚನ್, ವಲಯಮೇಲ್ವಿಚಾರಕಿ ವನಿತಾ ಸಂದರ್ಭೋಚಿತವಾಗಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಮೇರಿ, ಪುನರ್ವಸತಿ ಕಾರ್ಯಕರ್ತ ಸುನಿಲ್ ಪಿ.ವಿ.ಯವರು ಶುಭಹಾರೈಸಿದರು. ಸನ್ಮಾನಿತರಾದ ಭಾರತಿ ಜೆ.ಅವರು ಮಾತನಾಡಿ, ಇಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಸಿಕ್ಕಿದ ಬೆಂಬಲ ಮತ್ತು ಸ್ನೇಹದ ಕ್ಷಣಗಳನ್ನು ನೆನಪಿಸಿ ಕೃತಜ್ಞತೆ ಸಲ್ಲಿಸಿದರು.


ಶಿರಾಡಿ ಗ್ರಾ.ಪಂ.ಕಾರ್ಯದರ್ಶಿ ಶಾರದಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಿಯಾ ಸ್ವಾಗತಿಸಿದರು. ವಿಆರ್‌ಡಬ್ಲ್ಯು ಕಾರ್ಯಕರ್ತ ಸುನಿಲ್ ಪಿ.ವಿ.ವಂದಿಸಿದರು. ಕಲಾ ಸಣ್ಣಿ ನಿರೂಪಿಸಿದರು. ಆಲೀಸ್ ಜೋಸ್ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here