ನಾಳೆ( ಅ.7): ಹಿಂದೂ ಶೌರ್ಯ ಜಾಗರಣ ರಥಯಾತ್ರೆ, ಕಿಲ್ಲೆ ಮೈದಾನದಲ್ಲಿ ಸಂಗಮ – ಸೂಚಿಸಿದಲ್ಲಿ ವಾಹನ ಪಾರ್ಕಿಂಗ್ ಮಾಡುವಂತೆ ಸಂಘಟಕರ ಮನವಿ

0

ಪಾರ್ಕಿಂಗ್ – ಸಂಪೂರ್ಣ ವಿವರ

ಪುತ್ತೂರು: ವಿಶ್ವ ಹಿಂದೂ ಪರಿಷತ್ 60ನೇ ಷಷ್ಠ್ಯಬ್ದದ ಸಂದರ್ಭದಲ್ಲಿ ಅ.7ರಂದು ಪುತ್ತೂರಿನಲ್ಲಿ ನಡೆಯುವ ಹಿಂದೂ ಶೌರ್ಯ ಜಾಗರಣ ರಥಯಾತ್ರೆ ಮತ್ತು ಹಿಂದೂ ಶೌರ್ಯ ಸಂಗಮ ಕಾರ್ಯಕ್ರಮಕ್ಕೆ ಆಗಮಿಸುವ ಹಿಂದೂ ಬಾಂದವರು ತಮ್ಮ‌ ವಾಹನಗಳನ್ನು‌ ಪಾರ್ಕ್ ಮಾಡಲು ಸ್ಥಳವಕಾಶ ಸೂಚಿಸಲಾಗಿದ್ದು, ಸೂಚಿಸಿದ ಸ್ಥಳದಲ್ಲೇ ವಾಹನ ಪಾರ್ಕ್ ಮಾಡುವಂತೆ ಹಿಂದೂ ಶೌರ್ಯ ಜಾಗರಣ ರಥ ಯಾತ್ರೆ ಸ್ವಾಗತ ಸಮಿತಿ ವಿನಂತಿಸಿದೆ.


ಪಾಣಾಜೆ, ಕುಂಬ್ರ, ನರಿಮೊಗರು ಭಾಗದಿಂದ ಬರುವವರು ಮಹಾಲಿಂಗೇಶ್ವರ ದೇವಸ್ಥಾನ ಗದ್ದೆಯಲ್ಲಿ ಮತ್ತು ಉಪ್ಪಿನಂಗಡಿ, ಕಬಕ ಭಾಗದಿಂದ ಬರುವ ವಾಹನಗಳು ಹಾರಾಡಿ ರೈಲ್ವೇ ಸೇತುವೆ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಹಿಂದು ಬಾಂದವರು ಸಹಕರಿಸುವಂತೆ ಸ್ವಾಗತ ಸಮಿತಿ ವಿನಂತಿಸಿದೆ.

LEAVE A REPLY

Please enter your comment!
Please enter your name here