ಸರಸ್ವತಿ ಎಜ್ಯುಕೇಶನ್ ಸೊಸೈಟಿ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ ರಾಜಗೋಪಾಲ, ಪ್ರ. ಕಾರ್ಯದರ್ಶಿ ರಮೇಶ್ ಪ್ರಭು

ಪುತ್ತೂರು: ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ರಾಜಗೋಪಾಲ ಬಾಲೆಗುಳಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಪ್ರಭು ಆಯ್ಕೆಯಾಗಿದ್ದಾರೆ.


ಸೊಸೈಟಿಯ ಅಧ್ಯಕ್ಷರು, ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಕೆ.ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹರೀಶ್ ಬೋರ್ಕರ್ ಕತ್ತಲೆಕಾನ, ಜತೆ ಕಾರ್ಯದರ್ಶಿಯಾಗಿ ಹರೀಶ್ ನಾಯಕ್ ವಾಗ್ಲೆ, ಕೋಶಾಧಿಕಾರಿಯಾಗಿ ಗೋಪಾಲಕೃಷ್ಣ ಪ್ರಭು ಕುಂಟಿನಿ, ನಿರ್ದೇಶಕರಾಗಿ ಎಮ್. ಹರಿಪ್ರಸಾದ ಶರ್ಮ ಪುಂಡಿಕಾಯಿ, ವಸಂತ ವಾಗ್ಲೆ ಬನ್ನೂರು, ದೇವಿಪ್ರಸಾದ ಕಲ್ಲಾಜೆ, ರವೀಶ್ ಪೊಸವಳಿಕೆ, ಕಿರಣ್ ಪ್ರಭು ಮುಂಡಕೊಚ್ಚಿ, ಚೇತನ್ ಸಾಮೆತಡ್ಕ, ಶಂಕರ್ ನಾಯಕ್ ಆಜೇರು, ಮೂಲಚಂದ್ರ ಕಾಂಚನ, ಸದಾಶಿವ ನಾಯಕ್ ಕುಕ್ಕಪುಣಿ, ನವೀನ ಸುಳ್ಳಿ ನೆಲ್ಲೂರು ಕೆಮ್ರಾಜೆ, ಹರೀಶ್ಚಂದ್ರ ನಾಟೆಕಲ್ಲು ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ನಿಕಟಪೂರ್ವ ಅಧ್ಯಕ್ಷ ಅಣ್ಣಾ ವಿನಯಚಂದ್ರ ಕೆ., ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ, ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ಎ.ಬಾಲಕೃಷ್ಣ ನಾಯಕ್ ತೆಂಕಿಲ ಇವರನ್ನು ಆಯ್ಕೆ ಮಾಡಲಾಯಿತು. ಆಡಳಿತ ಮಂಡಳಿಯ ನಿಕಟಪೂರ್ವ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here