ಸಾಮೆತ್ತಡ್ಕ ಫರ್ನಿಚರ್ ಶಾಫ್‌ನಲ್ಲಿ ಕೆಲಸಕ್ಕಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ನಿಧನ

0

ಪುತ್ತೂರು: ಸಾಮೆತ್ತಡ್ಕದಲ್ಲಿ ಫರ್ನಿಚರ್ ಶಾಫ್‌ವೊಂದರಲ್ಲಿ ಕೆಲಸಕ್ಕಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕರೊಬ್ಬರು ತೀವ್ರ ನೋವಿನಿಂದ ಬಳಲುತ್ತಿದ್ದು ಅ.10ರಂದು ಪುತ್ತೂರು ಆಸ್ಪತ್ರೆಯಲ್ಲಿ ನಿಧನರಾದರು.
ಸಾಮೆತ್ತಡ್ಕ ನಿವಾಸಿಯಾಗಿರುವ ಭೀಮಯ್ಯ ಭಟ್ ಎಂಬವರ ಮಾಲಕತ್ವದ ಫರ್ನಿಚರ್ ಶಾಫ್‌ನಲ್ಲಿ ಕೆಲಸಕ್ಕಿದ್ದ ಮಹಾರಾಷ್ಟ್ರ ಮೂಲದ ಅರವಿಂದ್ ರಾಮ್ ಕಿಶೋರ್ ಜೈಸ್ವನ್ ಎಂಬವರು ಮೃತಪಟ್ಟವರು. ಅವರು ಕಳೆದ 5 ವರ್ಷದಿಂದ ಫರ್ನಿಚರ್ ಶಾಫ್‌ನಲ್ಲಿ ಕಾರ್ಮಿಕರಾಗಿದ್ದು, ಅವರು ಸಂಸ್ಥೆಯ ಮಾಲಕರ ಕಟ್ಟಡದಲ್ಲೇ ವಾಸ್ತವ್ಯ ಹೊಂದಿದ್ದರು. ಅ.9ರಂದು ರಾತ್ರಿ ಅರವಿಂದ್ ರಾಮ್ ಕಿಶೋರ್ ಜೈಸ್ವನ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರ ಜೊತೆಯಲ್ಲಿದ್ದ ಪಂಕಜ್ ಎಂಬವರು ಮಾಲಕರಿಗೆ ಮಾಹಿತಿ ನೀಡಿದಂತೆ ಕಾರಿನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅ.10ರ ಬೆಳಗ್ಗೆ ಅವರು ನಿಧನರಾದರು. ಭೀಮಯ್ಯ ಭಟ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here