ಸವಣೂರು ಮುಸ್ಲಿಂ ಯೂತ್ ವೆಲ್ಫೇರ್ ಅಸೋಸಿಯೇಶನ್ ರಿಯಾದ್ ಸಮಿತಿಯ ಮಹಾಸಭೆ

0

ಗೌರವಾಧ್ಯಕ್ಷ: ಅಬ್ಬಾಸ್ ಸವಣೂರು, ಅಧ್ಯಕ್ಷ: ಅಬ್ದುಲ್ ಖಾದರ್ ಚೆಡವು, ಕಾರ್ಯದರ್ಶಿ ಬಶೀರ್ ಕೆಲೆಂಬೀರಿ

ಪುತ್ತೂರು: ಸವಣೂರು ಮುಸ್ಲಿಂ ಯೂತ್ ವೆಲ್ಫೇರ್ ಅಸೋಸಿಯೇಶನ್ ರಿಯಾದ್ ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಅ.5ರಂದು ರಿಯಾದಿನ ಇಸ್ತ್ರಾದಲ್ಲಿ ನಡೆಯಿತು. ಸಮಿತಿಯ ಗೌರವಾಧ್ಯಕ್ಷ ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು.
ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಸಮಿತಿಯ ಕಾರ್ಯದರ್ಶಿ ಅರ್ಶಾದ್ ಆರಿಗಮಜಲ್ ಮಂಡಿಸಿದರು.
ಸಿ.ಎ ನಝೀರ್ ಮಾತನಾಡಿ ಸಮಿತಿಯು ಕಳೆದ 25 ವರ್ಷಗಳಿಂದ ಕಾರ್ಯಾಚರಿಸಿದ್ದು ಊರಿನ ಅಭಿವೃದ್ದಿ ಕಾರ್ಯಗಳಿಗೆ, ಬಡ ಅನಾಥ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ಕೆ ಹಾಗೂ ಇನ್ನಿತರ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಸಹಕಾರ ನೀಡುತ್ತಿದ್ದು ಮುಂದೆಯೂ ಎಲ್ಲಾ ಸದಸ್ಯರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ನಂತರ ನೂತನ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಅಬ್ಬಾಸ್ ಸವಣೂರು, ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಚೆಡವು, ಉಪಾಧ್ಯಕ್ಷರಾಗಿ ಸಿ.ಎ ನಝೀರ್ ಶಾಂತಿನಗರ, ಕಾರ್ಯದರ್ಶಿಯಾಗಿ ಬಶೀರ್ ಕೆಲೆಂಬೀರಿ, ಕೋಶಾಧಿಕಾರಿಯಾಗಿ ಅನ್ಸಾರ್ ಆರಿಗಮಜಲು ಜೊತೆ ಕಾರ್ಯದರ್ಶಿಯಾಗಿ ನೌಫಲ್ ಕೊಡಿಪ್ಪಾಡಿ ಆಯ್ಕೆಯಾದರು. ಅತಿಥಿಗಳಾಗಿ ಝೈನುಧ್ದೀನ್ ಹಾಜಿ ಬಯಂಬಾಡಿ, ಅಬ್ಬಾಸ್ ನಡುಬೈಲು, ಅಬ್ದುಲ್ ಲತೀಫ್ ಕೊಡಿಪ್ಪಾಡಿ, ಅಶ್ರಫ್ ಆರಿಗಮಜಲ್, ಉಮ್ಮರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಶ್ರಫ್ ಬಿ.ಸಿ, ಫಾರೂಕ್ ಕೊಡಿಪ್ಪಾಡಿ, ಕಲಂದರ್ ಅತ್ತಿಕರೆ, ಶಿಹಾಬುದ್ದೀನ್ ಸವಣೂರು, ಬಶೀರ್ ಚೆನ್ನಾರ್, ಶಾಫಿ ಚಾಪಳ್ಳ,ಪಯಾಝ್ ಪಣೆಮಜಲು, ಮುಸ್ತಫ ಚೆನ್ನಾರ್, ನವಾಫ್ ಎಸ್.ಆರ್, ಉಮ್ಮರ್ ನಿಂತಿಕಲ್, ಮುಝಮ್ಮಿಲ್, ಶೊಹೈಬ್ ಅತ್ತಿಕರೆ, ಇರ್ಫಾನ್ ಶಾಕಿರ್ ಪಣೆಮಜಲು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಅಧ್ಯಕ್ಷ ನೌಫಲ್ ಚೆಡವು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here