ವಲಯ ಮಟ್ಟದ ಕ್ರೀಡಾಕೂಟ-ನೆಲ್ಯಾಡಿ ಶ್ರೀರಾಮ ಶಾಲೆಯ ಮನೀಶ್‌ಗೆ ವೈಯಕ್ತಿಕ ಚಾಂಪಿಯನ್‌ ಶಿಪ್; ಹಲವು ವಿದ್ಯಾರ್ಥಿಗಳಿಗೆ ಪ್ರಶಸ್ತಿ

0

ನೆಲ್ಯಾಡಿ: ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯದ ವಿದ್ಯಾರ್ಥಿ ಮನೀಶ್ ಬಿ.ಶೆಟ್ಟಿಯವರು 200 ಮೀಟರ್, 100 ಮೀಟರ್ ಓಟ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಕ್ರೀಡಾಕೂಟದ ವ್ಯೆಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡಿದ್ದಾರೆ.


ಉಳಿದಂತೆ ಶಾಲೆಯ ವಿದ್ಯಾರ್ಥಿಗಳಾದ ಅಖಿಲ್ ಉದ್ದ ಜಿಗಿತದಲ್ಲಿ, 100ಮೀಟರ್ ಓಟದಲ್ಲಿ ಪ್ರಥಮ, ಪುಣ್ಯಶ್ರೀ 200 ಮೀಟರ್, 100ಮೀಟರ್ ಓಟದಲ್ಲಿ ದ್ವಿತೀಯ, ಹರ್ಷಿಣಿ 100 ಮೀಟರ್ ಓಟದಲ್ಲಿ ತೃತೀಯ, 600ಮೀಟರ್ ಓಟದಲ್ಲಿ ದ್ವಿತೀಯ, ಯೋಕ್ಷಿತಾ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.


ಪ್ರೌಢಶಾಲಾ ವಿಭಾಗದ ಬಾಲಕರ ರಿಲೇಯಲ್ಲಿ ದ್ವಿತೀಯ ಸ್ಥಾನ (ಮನೀಶ್,ಚೇತನ್, ಜಿತೇಶ್,ಚಿರಾಯು) ಹಾಗೂ 8ನೇ ತರಗತಿಯ ಬಾಲಕಿಯರ ರಿಲೇ ಓಟದಲ್ಲಿ ದ್ವಿತೀಯ ಸ್ಥಾನ(ಆದ್ವಿಕಾ,ಚೈತನ್ಯ, ಪುಣ್ಯಶ್ರೀ ಹರ್ಷಿಣಿ), ಪ್ರಾಥಮಿಕ ವಿಭಾಗದ ಬಾಲಕರ ರಿಲೇ ಓಟದಲ್ಲಿ ತೃತೀಯ ಸ್ಥಾನ (ಅಖಿಲ್, ಯಶ್ವಿತ್ ಪಿ, ನವೀಶ್, ಯಶ್ವಿನ್) ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here