ಅ.15-24 ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನವರಾತ್ರಿ ಸಂಭ್ರಮ

0

ಅ.15 ತುಲಾಭಾರ ಸೇವೆ
ಅ.18 ಅಕ್ಷರಾಭ್ಯಾಸ
ಅ.21 ಹೊಸ ಅಕ್ಕಿ ನೈವೇದ್ಯ ಸಮರ್ಪಣೆ
ಅ.22 ಚಂಡಿಕಾ ಯಾಗ
ಅ.23 ಆಯುಧ ಪೂಜೆ

ಪುತ್ತೂರು: ಕಾರಣಿಕ ಕ್ಷೇತ್ರ ರೈಲು ನಿಲ್ದಾಣದ ಬಳಿಯ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಅ.15ರಿಂದ ಪ್ರಾರಂಭಗೊಂಡು ಅ.24ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅ.15ರಂದು ಬೆಳಿಗ್ಗೆ ಗಣಪತಿ ಹೋಮ, ನಾಗತಂಬಿಲ, ಪಾಷಾಣಮೂರ್ತಿ, ಗುಳಿಗ ದೈವದ ತಂಬಿಲದೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ನಂತರ ತುಲಾಭಾರ ಸೇವೆ, ವಜ್ರಮಾತಾ ಭಜನಾ ಮಂಡಳಿಯವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ ಭಜನೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಅ.16ರಂದು ಬೆಳಿಗ್ಗೆ ಯಕ್ಷಾತರಂಗ ಪೆರ್ಲ ಇವರಿಂದ ಕದಂಬ ಕೌಶಿಕ ಯಕ್ಷಗಾನ ತಾಳಮದ್ದಲೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ಅ.17ರಂದು ಬೆಳಿಗ್ಗೆ ಚಂದ್ರಶೇಖರ್ ಮೂಡಾಯೂರು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ಮಹಾಪೂಜೆ, ದೇವಿ ದರ್ಶನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ವಿದುಷಿ ಪವಿತ್ರ ರೂಪೇಶ್ ಬಳಗದವರಿಂದ ಭಜನೆ, ಅ.18ರಂದು ಬೆಳಿಗ್ಗೆ ಶಿವಾರು ಶ್ರೀರಾಜರಾಜೇಶ್ವರಿ ಭಜನಾ ಮಂಡಳಿಯವರಿಂದ ಕುಣಿತ ಭಜನೆ, ಮಕ್ಕಳಿಗೆ ಅಕ್ಷರಾಭ್ಯಾಸ, ಮಧ್ಯಾಹ್ನ ಮಹಾಪೂಜೆ, ಸಂಜೆ ಲಕ್ಷ್ಮೀದೇವಿ ಭಕ್ತವೃಂದದವರಿಂದ ಭಜನೆ, ಅ.19ರಂದು ಮಧ್ಯಾಹ್ನ ಮಹಾಪೂಜೆ, ಸಂಜೆ ಶ್ರೀದೇವಿ ಪಾರಾಯಣ, ಶ್ರೀಲಕ್ಷ್ಮೀ ದೇವಿ ಭಕ್ತವೃಂದದವರಿಂದ ಭಜನೆ, ಮಹಾಪೂಜೆ, ಅ.20ರಂದು ಬೆಳಿಗ್ಗೆ ಗಾನಸಿರಿ ಕಲಾಕೇಂದ್ರದವರಿಂದ ಭಜನೆ, ಮಹಾಪೂಜೆ, ದೇವಿದರ್ಶನ, ಸಂಜೆ ಮಹಾಪೂಜೆ ನಡೆಯಲಿದೆ.

ಅ.21 ಹೊಸಅಕ್ಕಿ ನೈವೇದ್ಯ:
ಅ.21ರಂದು ಬೆಳಿಗ್ಗೆ ಸುಳ್ಯಪದವು ಕನ್ನಡ್ಕ ಶ್ರೀಮಹಾವಿಷ್ಣು ಮಕ್ಕಳ ತಂಡದಿಂದ ಕುಣಿತ ಭಜನೆ, ಮಧ್ಯಾಹ್ನ ಮಹಾಪೂಜೆ, ದೇವಿದರ್ಶನ, ದೇವರಿಗೆ ಹೊಸಅಕ್ಕಿ ನೈವೇದ್ಯ ಸಮರ್ಪಣೆ, ಪ್ರಸಾದ ವಿತರಣೆ, ರಾತ್ರಿ ಪ್ರೇಮಲತಾ ಮತ್ತು ಬಳಗ ಇವರಿಂದ ಭಜನೆ, ಮಹಾಪೂಜೆ ನಡೆಯಲಿದೆ.

ಅ.22 ಚಂಡಿಕಾಯಾಗ:
ಅ.22ರಂದು ಬೆಳಿಗ್ಗೆ ಗಣಪತಿ ಹೋಮ, ನಂತರ ಚಂಡಿಕಾ ಯಾಗ ಪ್ರಾರಂಭಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಪದ್ಮನಾಭ ಅರಿಯಡ್ಕ ಇವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ಚಂಡಿಕಾಯಾಗದ ಪೂರ್ಣಾಹುತಿ, ಮಹಾಪೂಜೆ, ದೇವಿ ದರ್ಶನ, ಪ್ರಸಾದ ವಿತರಣೆ, ಸಂಜೆ ಬನ್ನೂರು ಸ್ಪೂರ್ತಿ ಯುವಕ, ಯುವತಿ ಮಂಡಲದಿಂದ ಭಜನೆ, ಮಹಾಪೂಜೆ ನಡೆಯಲಿದೆ.

ಅ.23 ಆಯುಧಾ ಪೂಜೆ:
ಅ.23ರಂದು ಬೆಳಿಗ್ಗೆ ಕುಕ್ಕೆ ಸುಬ್ರಹ್ಮಣ್ಯ ವಿದ್ಯಾ ಸಾಗರ್ ಕಲಾ ಶಾಲೆ ಇವರಿಂದ ಭಜನೆ, ಮಹಾಪೂಜೆ, ಸಂಜೆ ಆಯುಧ ಪೂಜೆ, ಲಕ್ಷ್ಮೀದೇವಿ ಭಕ್ತದವರಿಂದ ಭಜನೆ, ಮಹಾಪೂಜೆ, ಅ.24ರಂದು ಬೆಳಿಗ್ಗೆ ಬೆಂಗಳೂರು ಸದ್ದಿದ್ಯಾ ಸಂಗೀತಾಯದ ಎಲ್.ಆರ್ ವಿಜಯರಂಗ ಇವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ದೇವಿದರ್ಶನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಭಜನೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆಯೊಂದಿಗೆ ನವರಾತ್ರಿ ಉತ್ಸವಗಳು ಸಂಪನ್ನಗೊಳ್ಳಲಿದೆ. ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here