ಕಲ್ಲರ್ಪೆಯಲ್ಲಿ ಬೈಕ್, ರಿಕ್ಷಾ ಡಿಕ್ಕಿ

0

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪ್ಯ ಕಲ್ಲರ್ಪೆಯಲ್ಲಿ ಬೈಕ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಅ.13ರಂದು ನಡೆದಿದೆ.
ಬೈಕ್ ಸವಾರ ಒಳಮೊಗ್ರು ಗ್ರಾಮದ ನಿವಾಸಿ ಕನಿಷ್ಕ ಶೆಟ್ಟಿ(25ವ) ಎಂಬವರು ಗಾಯಾಳು. ಅವರು ಚಲಾಯಿಸುತ್ತಿದ್ದ ಬೈಕ್ ಮತ್ತು ವಿರುದ್ದ ಧಿಕ್ಕಿನಿಂದ ಬರುತ್ತಿದ್ದ ಆಟೋ ರಿಕ್ಷಾ ನಡುವೆ ಸಂಪ್ಯ ಕಲ್ಲರ್ಪೆಯಲ್ಲಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕನಿಷ್ಕ ಶೆಟ್ಟಿಯವರು ಗಾಯಗೊಂಡಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here