ಕೆಯ್ಯೂರು ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಳದಲ್ಲಿ  ನವರಾತ್ರಿ ಉತ್ಸವ- ಮಹಾಗಣಪತಿ ಹೋಮ,ಚಂಡಿಕಾಯಾಗ ಮತ್ತು ತೆನೆ ತುಂಬಿಸುವ ಕಾರ್ಯಕ್ರಮ

0

ಕೆಯ್ಯೂರು:  ಶ್ರೀ ಕ್ಷೇತ್ರ  ಕೆಯ್ಯೂರು ಮಹಿಷಮರ ದುರ್ಗಾಪರಮೇಶ್ವರಿ ದೇವಳದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ದೇವಳದ ವಠಾರದಲ್ಲಿ ಅ.15 ರಂದು, ಗಣೇಶ್ ಭಟ್ ಮಾಡಾವು ನೇತೃತ್ವದಲ್ಲಿ ಮಹಾ ಗಣಪತಿ ಹೋಮ ಮತ್ತು ಚಂಡಿಕಾಯಾಗವು ನಡೆಯಿತು. ಬೆಳಿಗ್ಗೆ 10.30ಕ್ಕೆ ತೆನೆ ತುಂಬಿಸುವ ಕಾರ್ಯಕ್ರಮವನ್ನು ದೇವಳದ ಪ್ರಧಾನ ಅರ್ಚಕರಾದ ಶ್ರೀನಿವಾಸ ರಾವ್ ಮತ್ತು ಆನಂದ ಭಟ್ ದೇವರಿಗೆ ಪ್ರಾರ್ಥನೆ ಸಲ್ಲಿಸಿ ನೇರವೇರಿಸಿದರು.

ಈ  ಸಂದರ್ಭದಲ್ಲಿ  ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲ, ಸದಸ್ಯರುಗಳಾದ ಶ್ರೀನಿವಾಸ ರಾವ್, ರಾಮಣ್ಣ ಗೌಡ ಮಾಡಾವು, ಬಾಬು ಪಾಟಾಳಿ ದೇರ್ಲ, ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ, ವಿಶ್ವನಾಥ ಶೆಟ್ಟಿ ಸಾಗು, ಚರಣ್ ಕುಮಾರ್ ಸಣಂಗಳ, ಈಶ್ವರೀ ಜೆ ರೈ ಸಂತೋಷ್ ನಗರ, ಮಮತಾ ಎಸ್ ರೈ ಕೆಯ್ಯೂರು, ಕ್ಷೇತ್ರದ ಮಾಜಿ ವ್ಯವಸ್ಥಾಪನಾ ಸಮಿತಿ ಅದ್ಯಕ್ಷರು,ಸದಸ್ಯರುಗಳು, ಅರ್ಚಕವೃಂದ,ನೌಕರವೃಂದ, ಸಹಕರಿಸುವ ಸಂಘ ಸಂಸ್ಥೆಗಳು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here