ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನವರಾತ್ರಿ ಸಂಭ್ರಮಕ್ಕೆ ಚಾಲನೆ

0

ಪುತ್ತೂರು: ಕಾರಣಿಕ ಕ್ಷೇತ್ರ ರೈಲು ನಿಲ್ದಾಣದ ಬಳಿಯ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 9 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಲಿರುವ ನವರಾತ್ರಿ ಉತ್ಸವವು ಅ.15ರಂದು ಚಾಲನೆ ದೊರೆಯಿತು.


ಬೆಳಿಗ್ಗೆ ಗಣಪತಿ ಹೋಮ, ನಾಗತಂಬಿಲ, ಪಾಷಾಣಮೂರ್ತಿ, ಗುಳಿಗ ದೈವದ ತಂಬಿಲದೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಭಕ್ತಾದಿಗಳಿಂದ ತುಲಾಭಾರ ಸೇವೆ, ವಜ್ರಮಾತಾ ಭಜನಾ ಮಂಡಳಿಯವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ ಭಜನೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಧರ್ಮದರ್ಶಿ ಐತ್ತಪ್ಪ ಸಪಲ್ಯ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ನೂರಾರು ಮಂದಿನ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನವರಾತ್ರಿ ಉತ್ಸವದಲ್ಲಿ ಪ್ರತಿದಿನ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಕುಣಿತ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.


ಅ.18 ಅಕ್ಷರಾಭ್ಯಾಸ, ಅ.21 ಹೊಸ ಅಕ್ಕಿ ನೈವೇದ್ಯ:
ಅ.16ರಂದು ಬೆಳಿಗ್ಗೆ ಯಕ್ಷಾತರಂಗ ಪೆರ್ಲ ಇವರಿಂದ ಕದಂಬ ಕೌಶಿಕ ಯಕ್ಷಗಾನ ತಾಳಮದ್ದಲೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ಕ್ಷೇತ್ರದಲ್ಲಿ ಅ.16ರಂದು ಬೆಳಿಗ್ಗೆ ಯಕ್ಷಾತರಂಗ ಪೆರ್ಲ ಇವರಿಂದ ಕದಂಬ ಕೌಶಿಕ ಯಕ್ಷಗಾನ ತಾಳಮದ್ದಲೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ಅ.17ರಂದು ಬೆಳಿಗ್ಗೆ ಚಂದ್ರಶೇಖರ್ ಮೂಡಾಯೂರು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ಮಹಾಪೂಜೆ, ದೇವಿ ದರ್ಶನ, ಅನ್ನಸಂತರ್ಪಣೆ, ರಾತ್ರಿ ವಿದುಷಿ ಪವಿತ್ರ ರೂಪೇಶ್ ಬಳಗದವರಿಂದ ಭಜನೆ, ಅ.18ರಂದು ಬೆಳಿಗ್ಗೆ ಶಿವಾರು ಶ್ರೀರಾಜರಾಜೇಶ್ವರಿ ಭಜನಾ ಮಂಡಳಿಯವರಿಂದ ಕುಣಿತ ಭಜನೆ, ಮಕ್ಕಳಿಗೆ ಅಕ್ಷರಾಭ್ಯಾಸ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ಅ.21ರಂದು ಬೆಳಿಗ್ಗೆ ಸುಳ್ಯಪದವು ಕನ್ನಡ್ಕ ಶ್ರೀಮಹಾವಿಷ್ಣು ಮಕ್ಕಳ ತಂಡದಿಂದ ಕುಣಿತ ಭಜನೆ, ಮಧ್ಯಾಹ್ನ ಮಹಾಪೂಜೆ, ದೇವಿದರ್ಶನ, ದೇವರಿಗೆ ಹೊಸಅಕ್ಕಿ ನೈವೇದ್ಯ ಸಮರ್ಪಣೆ ನಡೆಯಲಿದೆ.


ಅ.22 ಚಂಡಿಕಾಯಾಗ, ಅ.22 ಆಯುಧಾ ಪೂಜೆ:
ನವರಾತ್ರಿಯಲ್ಲಿ ವಿಶೇವಾಗಿ ಅ.22ರಂದು ಬೆಳಿಗ್ಗೆ ಗಣಪತಿ ಹೋಮ, ನಂತರ ಚಂಡಿಕಾ ಯಾಗ, ಪದ್ಮನಾಭ ಅರಿಯಡ್ಕ ಇವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ಚಂಡಿಕಾಯಾಗದ ಪೂರ್ಣಾಹುತಿ, ಮಹಾಪೂಜೆ, ದೇವಿ ದರ್ಶನ, ಅನ್ನಸಂತರ್ಪಣೆ, ಸಂಜೆ ಬನ್ನೂರು ಸ್ಪೂರ್ತಿ ಯುವಕ, ಯುವತಿ ಮಂಡಲದಿಂದ ಭಜನೆ, ಮಹಾಪೂಜೆ, ಅ.23ರಂದು ಬೆಳಿಗ್ಗೆ ಕುಕ್ಕೆ ಸುಬ್ರಹ್ಮಣ್ಯ ವಿದ್ಯಾ ಸಾಗರ್ ಕಲಾ ಶಾಲೆ ಇವರಿಂದ ಭಜನೆ, ಮಹಾಪೂಜೆ, ಸಂಜೆ ಆಯುಧ ಪೂಜೆ, ಲಕ್ಷ್ಮೀದೇವಿ ಭಕ್ತದವರಿಂದ ಭಜನೆ, ಮಹಾಪೂಜೆ, ಅ.24ರಂದು ಬೆಳಿಗ್ಗೆ ಬೆಂಗಳೂರು ಸದ್ದಿದ್ಯಾ ಸಂಗೀತಾಯದ ಎಲ್.ಆರ್ ವಿಜಯರಂಗ ಇವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ದೇವಿದರ್ಶನ, ಸಂಜೆ ಭಜನೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆಯೊಂದಿಗೆ ನವರಾತ್ರಿ ಉತ್ಸವಗಳು ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here