![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಸವಣೂರು ಪೆರಿಯಡ್ಕ ಶ್ರೀ ಆದಿಶಕ್ತಿ ಭಜನಾ ಮಂಡಳಿ ಹಾಗೂ ಉತ್ಸವ ಸಮಿತಿಯವತಿಯಿಂದ 3ನೇ ವರ್ಷದ ಹಗ್ಗಜಗ್ಗಾಟ ಸ್ಪರ್ಧೆಯ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಪೆರಿಯಡ್ಕದಲ್ಲಿ ಅ. 15 ರಂದು ನಡೆಯಿತು.
ಸಂಸ್ಥೆಯ ಗೌರವಾಧ್ಯಕ್ಷ ರಾಜಾರಾಮ್ ಪ್ರಭುರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮದ ಯಶಸ್ವಿಗೆ ಶುಭಹಾರೈಸಿದರು. ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಕುಕ್ಕುಜೆ, ಕಾರ್ಯದರ್ಶಿ ಪ್ರವೀಣ್ ಪೆರಿಯಡ್ಕ, ಗಂಗಾಧರ ಪೆರಿಯಡ್ಕ, ಮಹಾಬಲ ಪೆರಿಯಡ್ಕ, ಕಿಶನ್ ಪೆರಿಯಡ್ಕ, ಮಿಥುನ್ ಅಗರಿ, ಚೇತನ್ ಇಡ್ಯಾಡಿ, ರಾಜೇಶ್ ಇಡ್ಯಾಡಿ,ಮನೋಜ್ ಕುಕ್ಕುಜೆ,ದೈಹಿಕ ಶಿಕ್ಷಕ ಮನೋಹರ್ ಮೆದು, ಜಗದೀಶ್ ಇಡ್ಯಾಡಿ ಉಪಸ್ಥಿತರಿದ್ದರು.