ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರ್ವೆ ಎ ಒಕ್ಕೂಟದ ಸಭೆ-ಅನಾರೋಗ್ಯ ಪೀಡಿತ ಸದಸ್ಯೆಗೆ ಆರ್ಥಿಕ ನೆರವು

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಪುತ್ತೂರು ಸರ್ವೆ ಎ ಒಕ್ಕೂಟದ ಮಾಸಿಕ ಸಭೆ ಕಲ್ಪನೆ ಸಮುದಾಯ ಭವನದಲ್ಲಿ ಒಕ್ಕೂಟದ ಅಧ್ಯಕ್ಷ ಸುಂದರ ಬಲ್ಯಾಯ ಅಧ್ಯಕ್ಷತೆಯಲ್ಲಿ ನಡೆಯಿತು.ಸ್ವಸಹಾಯ ಸಂಘದ ಸದಸ್ಯೆಯೋರ್ವರ ಕಾಲು ಸರ್ಜರಿಯಾಗಿ ಸುಮಾರು ಆರು ತಿಂಗಳು ಮಲಗಿದ ಸ್ಥಿತಿಯಲ್ಲಿದ್ದು ಅವರಿಗೆ ಒಕ್ಕೂಟದ ಎಲ್ಲಾ ಸಂಘದ ಸದಸ್ಯರು ಒಟ್ಟು ಸೇರಿ ಆರ್ಥಿಕ ಸಹಾಯವನ್ನು ಮಾಡಿದರು.

ಒಟ್ಟು ಸೇರಿದ ಹಣವನ್ನು ಒಕ್ಕೂಟದ ಅಧ್ಯಕ್ಷ ಸುಂದರ ಬಲ್ಯಾಯ ಅವರು ಗಾಯಾಳುವಿನ ತಾಯಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ರೇಖಾ ರೈ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಚಂದ್ರೋದಯ ಸಂಘದ ಸದಸ್ಯ ಅಕ್ಷಯ್ ಸ್ವಾಗತಿಸಿದರು. ಮಹಮ್ಮದ್ ಹನೀಫ್ ವಂದಿಸಿದರು.

LEAVE A REPLY

Please enter your comment!
Please enter your name here