ಇತ್ತೀಚೆಗೆ ನಿಧನರಾದ ಪುರುಷೋತ್ತಮ ಕಲ್ಪಡರವರ ಮನೆಗೆ ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ ಪದಾಧಿಕಾರಿಗಳ ಭೇಟಿ

0

ಪುತ್ತೂರು: ಇತ್ತೀಚೆಗೆ ನಿಧನರಾದ ಕಾಣಿಯೂರು ವಲಯದ ಮಾಜಿ ಕಾರ್ಯದರ್ಶಿ ಪುರುಷೋತ್ತಮ ಕಲ್ಪಡರವರ ಮನೆಗೆ ಅ.16 ರಂದು ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್‌ನ ಪದಾಧಿಕಾರಿಗಳು, ಪುತ್ತೂರು ಕ್ಷೇತ್ರದ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಜಯರಾಮ ಬಿ. ಯನ್. ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ವಲಯದ ಸದಸ್ಯರಿಂದ ಸಂಗ್ರಹಿಸಿದ ಹಣದಿಂದ ವಸ್ತುರೂಪದಲ್ಲಿ 60. ಕೆ..ಜಿ. ಅಕ್ಕಿಯನ್ನು ನೀಡಲಾಯಿತು. ಜಯರಾಮ್ ಬಿ ಯನ್, ಕ್ಷೇತ್ರ ಸಮಿತಿಯ ಕೋಶಾಧಿಕಾರಿ ಪರಮೇಶ್ವರ ಅನಿಲ, ವಲಯಾಧ್ಯಕ್ಷೆ ಜಯಶ್ರೀ. ಪಿ. ಕೆ. ಕೋಶಾಧಿಕಾರಿ ಯಶವಂತ. ಕೆ, ಮಾಜಿ ಅಧ್ಯಕ್ಷರಾದ ರಮೇಶ್ ಸುವರ್ಣ ಅಬೀರ, ಸದಸ್ಯರಾದ ಶೀನಪ್ಪ ಅಬೀರ, ರಾಧಾಕೃಷ್ಣ ರೈ ಪಟ್ಟೆ, ಗಿರೀಶ್ ಕಾನಾವು ಮತ್ತು ಮೃತರ ಪತ್ನಿ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here