ನೇರೋಳ್ತಡ್ಕ – ಸಾರಕರೆ ರಸ್ತೆ ಕಾಂಕ್ರಿಟೀಕರಣ

0

ಪುತ್ತೂರು: ಪುಣ್ಚಪಾಡಿ ಗ್ರಾಮದ ನೇರೋಳತಡ್ಕ – ಸಾರಕರೆ ರಸ್ತೆಯು ದುರಸ್ತಿಯಾಗದೆ ಬಹಳ ಕಾಲ ಆಗಿತ್ತು. ಗ್ರಾಮದ ಬಹುಜನರ ಬೇಡಿಕೆಯನ್ನು ಅರಿತು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕಿ ಭಾಗೀರಥಿ ಮರುಳ್ಯ ಅವರ ಅನುದಾನದ ಭರವಸೆಯೊಂದಿಗೆ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ 500 ಮೀಟರ್ ರಸ್ತೆಯು ಕಾಂಕ್ರಿಟೀಕರಣ ಆಗಿರುತ್ತದೆ. ರಸ್ತೆಯನ್ನು ಗುತ್ತಿಗೆದಾರ ಯೋಗೀಶ್ ಪೂಜಾರಿ ನಿರ್ಮಿಸಿ ಕೊಟ್ಟಿದ್ದಾರೆ ಅ.15ರಂದು ರಸ್ತೆಯನ್ನು ಸಂಚಾರಕ್ಕೆ ಬಿಟ್ಟು ಕೊಡಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಸೇರಿ ಅನುದಾನ ಒದಗಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಹಾಗೂ ಈ ರಸ್ತೆಯನ್ನು ನಿರ್ಮಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಹಾಗೂ ಈ ಭಾಗದ ಗ್ರಾಮ ಪಂಚಾಯತ್ ಸದಸ್ಯರಿಗೆ ಮತ್ತು ಅಭಿವೃದ್ಧಿ ಅಧಿಕಾರಿಗಳಿಗೆ ಧನ್ಯವಾದಗಳು ಅರ್ಪಿಸಲಾಯಿತು.

LEAVE A REPLY

Please enter your comment!
Please enter your name here