ಒಳಮೊಗ್ರು: ಪ್ರಗತಿಪರ ಕೃಷಿಕ ಧನಂಜಯ ರೈ ಪುಂಡಿಕಾಯಿ‌ ನಿಧನ

0

ಪುತ್ತೂರು: ಪ್ರಗತಿಪರ ಕೃಷಿಕ ಒಳಮೊಗ್ರು ಗ್ರಾಮದ ಪುಂಡಿಕಾಯಿ ನಿವಾಸಿ ಧನಂಜಯ ರೈ ( 61 ವ.) ರವರು ಅಲ್ಪಕಾಲದ ಅಸೌಖ್ಯದಿಂದ ಅ.17ರಂದು ರಾತ್ರಿ ನಿಧನರಾದರು. ಇವರು ಪುತ್ತೂರು ದರ್ಬೆ ಮೊಯ್ದಿನ್ ಬಿಲ್ಡಿಂಗ್ ನಲ್ಲಿ 15 ವರುಷಗಳ ಹಿಂದೆ ಶ್ರುತಿ ಹಾರ್ಡವೇರ್ ಅಂಗಡಿಯನ್ನು ನಡೆಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳು, ಮೂವರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಅ.18ರಂದು ಮಧ್ಯಾಹ್ನ ಮೃತರ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here