ಪುತ್ತೂರು ಶಾರದೋತ್ಸವ: 5ನೇ ದಿನ ಕಾರ್ಯಕ್ರಮ

0

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿಯ 5ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಅ.19ರಂದು ಸಂಜೆ ನಡೆಯಿತು. ಕಾರ್ಯಕ್ರಮವನ್ನು ದೇವಾಲಯಗಳ ಅಧ್ಯಯನಕಾರ, ಭಜನಾ ಮಂದಿರದ ಸದಸ್ಯ ಪಿ.ಜಿ. ಚಂದ್ರಶೇಖರ ರಾವ್‌ರವರು ಉದ್ಘಾಟಿಸಿ ಶುಭಹಾರೈಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಪವಿತ್ರ ರೂಪೇಶ್ ಹಾಗೂ ವಿದುಷಿ ರೂಪಾಶ್ರೀ ಶ್ರವಣ್ ಬಳಗದವರಿಂದ ಭಕ್ತಿಗೀತೆ-ದಾಸರ ಪದಗಳು ನಡೆಯಿತು. ರಿದಂ ಪ್ಯಾಡ್‌ಲ್ಲಿ ಸುಹಾಸ್ ಹೆಬ್ಬಾರ್, ಕೀ ಬೋರ್ಡ್‌ನಲ್ಲಿ ಡಾ. ದಿನೇಶ್ ರಾವ್ ಸುಳ್ಯ ಹಾಗೂ ತಬಲಾದಲ್ಲಿ ಸಾಯಿರಾಮ ರಾವ್‌ರವರು ಸಹಕರಿಸಿದರು. ಉತ್ಸವ ಸಮಿತಿ ಸಂಚಾಲಕ ಪಿ.ಜಿ. ಜಗನ್ನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here