ಕೆಎಸ್‌ಆರ್‌ಟಿಸಿ ದಸರಾ ಪ್ಯಾಕೇಜ್:ಮಂಗಳೂರು-ಪುತ್ತೂರು ಪ್ರವಾಸ

0

ಮಂಗಳೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗವು ದಸರಾ ಪ್ರಯುಕ್ತ ಜಿಲ್ಲೆಯ ವಿವಿಧ ದೇವಸ್ಥಾನ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಒಂದು ದಿನದ ಪ್ಯಾಕೇಜ್ ಪ್ರವಾಸ ಕಾರ್ಯಾಚರಣೆಯನ್ನು ಅ.20ರಿಂದ 24ರವರೆಗೆ ಹಮ್ಮಿಕೊಂಡಿದೆ.ಪ್ರಯಾಣಿಕರು ಈ ಸಾರಿಗೆ ಅನುಕೂಲಕ್ಕಾಗಿ www.ksrtc.in ವೆಬ್‌ಸೈಟ್ ಮೂಲಕ ಮುಂಗಡ ಆಸನ ಕಾಯ್ದಿರಿಸಿಕೊಳ್ಳಬಹುದಾಗಿದೆ.


ಮಂಗಳೂರು ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಟು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಮೃತ್ಯುಂಜೇಶ್ವರ ದೇವಸ್ಥಾನ, ಉಮಾಮಹೇಶ್ವರಿ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಗೆಜ್ಜೆಗಿರಿ,ಹನುಮಗಿರಿ ಕ್ಷೇತ್ರ ಸಂದರ್ಶನ ಮಾಡಿ ಸಂಜೆ 6.45ಕ್ಕೆ ಮಂಗಳೂರು ತಲುಪಲಿದೆ.ವಯಸ್ಕರಿಗೆ ರೂ.500 ಹಾಗೂ 6ರಿಂದ 12 ವರ್ಷದೊಳಗಿನ ಮಕ್ಕಳಿಗೆ ರೂ.400 ಪ್ರಯಾಣದರ ನಿಗದಿಪಡಿಸಿದೆ.

ಹೆಚ್ಚಿನ ಮಾಹಿತಿಗೆ ಮಂಗಳೂರು ಮುಂಗಡ ಬುಕಿಂಗ್ ಕೌಂಟರ್ ಸಂಖ್ಯೆ: 9663211553 ಹಾಗೂ ಬಸ್ ನಿಲ್ದಾಣ ಸಂಖ್ಯೆ: 7760990720 ಅನ್ನು ಸಂಪರ್ಕಿಸುವಂತೆ ಕೆಎಸ್‌ಆರ್‌ಟಿಸಿ ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here