ಅ‌. 21 ರಂದು ನೆಟ್ಟಣ ಸೈಂಟ್ ಮೇರೀಸ್ ಚರ್ಚ್ ನಲ್ಲಿ ರಜತ ಮಹೋತ್ಸವ ಕಾರ್ಯಕ್ರಮ

0

ಪುತ್ತೂರು: ನೆಟ್ಟಣದ ಸೈಂಟ್ ಮೇರೀಸ್ ಚರ್ಚ್ ನಲ್ಲಿ ಅ.21 ಶನಿವಾರದಂದು ಗುರು ದೀಕ್ಷೆಯ ರಜತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 10.30 ಕ್ಕೆ ದಿವ್ಯ ಬಲಿ ಪೂಜೆ ನಡೆಯಲಿದ್ದು ಮಧ್ಯಾಹ್ನ 12.30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಕುಟ್ರುಪಾಡಿ ವಲಯದ ಮುಖ್ಯ ಧರ್ಮ ಗುರು ರೆ. ಫಾ. ವರ್ಗಿಸ್ ಪುದಿಯೇಡತ್ ವಹಿಸಲಿದ್ದಾರೆ. ಸಿ. ಎಂ . ಐ ಮೈಸೂರು ಸಂಟ್ ಪೌಲ್ ಪ್ರೋವಿಂಸಿನ ಪ್ರಾವಿನ್ಸಿಯಲ್ ರೆ . ಫಾ ಆಗಸ್ಟಿನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ಗುರುದೀಕ್ಷೆಯ ರಜತ ಮಹೋತ್ಸವ ಸಂಭ್ರಮದಲ್ಲಿ ಇರುವ ರೆ.ಫಾ ಅಲೆಕ್ಸ್ ಒಟ್ಟಾಪ್ಲಕ್ಕಾಲ್ , ರೆ.ಫಾ ತೋಮಸ್ ಕಲಾಪುರಕ್ಕಾಲ್, ರೆ.ಫಾ ಸಿಬಿಚ್ಚನ್ ಪೌಲ್ ಮರಂಗೋಲಿಲ್ , ರೆ.ಫಾ ಸೆಭಾಸ್ಟಿನ್ ಸಿ.ಕೆ, ರೆ.ಫಾ ವರ್ಗೀಸ್ ಪೌಲ್ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ

LEAVE A REPLY

Please enter your comment!
Please enter your name here