ಶಾಸಕರ ಕಚೇರಿ ಮುಂದೆ ವೈಭವದ ಹುಲಿ ನೃತ್ಯ

0

ಪುತ್ತೂರು; ನವರಾತ್ರಿ ಹಬ್ಬದ ಪ್ರಯುಕ್ತ ಶಾಸಕರಾದ ಅಶೋಕ್ ರೈ ಅವರ ಕಚೇರಿ ಅಂಗಣದಲ್ಲಿ ವೈಭವದ ಹುಲಿ ನೃತ್ಯ ನಡೆಯಿತು.
ಟೀಂ ಕಲ್ಲೆಗ ಟೈಗರ್ಸ್ ಹುಲಿ ನೃತ್ಯ ತಂಡದ ಕಲಾವಿದರ ತಂಡದಿಂದ ವಿವಿಧ ನೃತ್ಯಗಳು ನಡೆದವು. ಬೆಳಿಗ್ಗೆ ಶಾಸಕರ ಮಂಗಳೂರು ಕಚೇರಿಯಲ್ಲಿ ಆಯುಧ ಪೂಜಾ ಕಾರ್ಯಕ್ರಮ ನೆರವೇರಿತ್ತು. ಸಂಜೆ ಪುತ್ತೂರು ಕಚೇರಿ ಅಂಗಣದಲ್ಲಿ ಹುಲಿ ನೃತ್ಯವನ್ನು ಶಾಸಕರು ಏರ್ಪಡಿಸಿದ್ದರು.

ಕಾರ್ಯಕ್ರಮ ವೀಕ್ಷಿಸಲು ಸಾರ್ವಜನಿಕರು ನೆರೆದಿದ್ದರು. ಶಾಸಕರಾದ ಅಶೋಕ್ ರೈ, ರೈ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ, ಟ್ರಸ್ಟ್ ನ ಪ್ರಮುಖರಾದ ನಿಹಾಲ್ ಶೆಟ್ಟಿ ಸೇರಿದಂತೆ ಹಲವು ಮುಖಂಡರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here