ಸುದ್ದಿ ಚಾನೆಲ್ ಮುಖ್ಯಸ್ಥ ದಾಮೋದರ ದೊಂಡೋಲೆಗೆ ಪಿತೃ ವಿಯೋಗ

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ದೊಂಡೋಲೆ ನಿವಾಸಿ ಸಂಜೀವ ಸಫಲ್ಯ(76.ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಅ.23ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಯಮುನಾ, ಪುತ್ರರಾದ ಚಂದ್ರಹಾಸ್, ರಘುಚಂದ್ರ, ಸುದ್ದಿ ನ್ಯೂಸ್ ಚಾನೆಲ್ ಮುಖ್ಯಸ್ಥ ದಾಮೋದರ ದೊಂಡೋಲೆ, ನವೀನ್, ಸೊಸೆಯಂದಿರಾದ ಜಯಂತಿ, ಯಶೋದಾ, ಶ್ರೀವರ್ಷ, ಮೊಮ್ಮಕ್ಕಳು ಮತ್ತು ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವಾನಂದ, ಪುತ್ತೂರು ಸುದ್ದಿ ಬಿಡುಗಡೆ ಸಿಇಓ ಸೃಜನ್ ಊರುಬೈಲು, ಬೆಳ್ತಂಗಡಿ ಸುದ್ದಿ ಬಿಡುಗಡೆ ಸಿಇಓ ಸಿಂಚನ ಊರುಬೈಲು, ವ್ಯವಸ್ಥಾಪಕ ಮಂಜುನಾಥ ರೈ ನಂಜೆ, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್, ಧರ್ಮಸ್ಥಳ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರೀತಂ, ದೊಂಡೋಲೆ ಹಿರಿಮನೆಯ ಸೂರ್ಯನಾರಾಯಣ ರಾವ್, ಸುದ್ದಿ ಬಿಡುಗಡೆ ಬಳಗದ ಸಿಬ್ಬಂದಿಗಳು ಸಹಿತ ಹಲವರು ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here