ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ ನೂತನ ಮಂದಿರದ ಶಿಲನ್ಯಾಸ

0

ಮಾರ್ಚ್ ತಿಂಗಳ 23,24ಕ್ಕೆ ಭಜನಾ ಮಂದಿರದ ಲೋಕಾರ್ಪಣೆ

ವಿಟ್ಲ: ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ ನೂತನವಾಗಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಭಜನಾಮಂದಿರದ ಶಿಲನ್ಯಾಸ ನಡೆಯಿತು‌.

ವೇದ ಮೂರ್ತಿ ಶ್ರೀಧರ ಭಟ್ ಕಬಕರವರು ವಿಧಿ ವಿಧಾನ ನೆರವೇರಿಸಿದರು. ಎಸ್.ಎಲ್.ವಿ.ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ದಿವಾಕರ ದಾಸ್ ನೇರ್ಲಾಜೆ ಶಿಲನ್ಯಾಸ ನೆರವೇರಿಸಿದರು. ಇಡ್ಕಿದು ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಬೈಪದವು, ಸಂಜೀವ ಗೌಡ ಪೆಲತ್ತಿಂಜ ಹಾಗೂ ಭವ್ಯಸಂಜೀವ ಗೌಡ ಪೆಲತ್ತಿಂಜ, ಭಜನಾಮಂದಿರದಗೌರವ ಸಲಹೆಗಾರರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಗೌರವಾಧ್ಯಕ್ಷರಾದ ಸೋಮಶೇಖರ ಶೆಟ್ಟಿ ಅಳಕೆಮಜಲು, ಅಧ್ಯಕ್ಷರಾದ ಜಗದೀಶ ಪೂಜಾರಿ ಅಳಕೆಮಜಲು, ಕಾರ್ಯದರ್ಶಿ ತಿರುಮಲೇಶ್ವರ ನಾಯ್ಕ್ ಅಳಕೆಮಜಲು, ಖಜಾಂಜಿ ಸುಧೀರ್ ನಾಯ್ಕ್ ಕೆಮನಾಜೆ, ಉಪಾಧ್ಯಕ್ಷರಾದ ಭಾಸ್ಕರ ರೈ ಅಳಕೆಮಜಲು, ಜೊತೆಕಾರ್ಯದರ್ಶಿ ದಿನೇಶ್ ಪೆಲತ್ತಿಂಜ, ಸದಸ್ಯರಾದ ಚಿದಾನಂದ ಪೆಲತ್ತಿಂಜ, ಕೃಷ್ಣಪ್ಪ ಕೆಮನಾಜೆ, ಉದಯಕುಲಾಲ್ ಪುಂಡಿಕಾಯಿ, ಚಿದಾನಂದ ಪೆಲತ್ತಿಂಜ, ದಾಮೋದರ ಪೂಜಾರಿ, ಬಾಲಕೃಷ್ಣ , ಶೇಖರ ಪೂಜಾರಿ, ಪ್ರದೀಪ್ ಶೆಟ್ಟಿ, ಪ್ರದೀಪ್ ಉರಿಮಜಲು, ಪ್ರವೀಣ್ ಶೆಟ್ಟಿ, ಅಶೋಕ, ಸುಂದರ ಪೆಲತ್ತಿಂಜ, , ಕಿಶೋರ್ ಕುಮಾರ್ ಪೆಲತ್ತಿಂಜ, ಯಾದವ, ಮಾಧವ, ಅಶೋಕ, ಸತೀಶ್ , ದೀಕ್ಷಿತ್, ಸತೀಶ್ ನಾಯ್ಕ್, ನಿತಿನ್ ಕುಲಾಲ್ ಮಹಿಳಾ ಸಮಿತಿ ಅಧ್ಯಕ್ಷರಾದ ಸುಗಂಧಿನಿ ಪೆಲತ್ತಿಂಜ, ಕಾರ್ಯದರ್ಶಿ ವನಿತಾ ಜೇಡರಕೋಡಿ, ಸದಸ್ಯರಾದ ನಳಿನಿ, ಸುಮಲತ, ಭವ್ಯ, ವಸಂತಿ ಮೊದಲಾದವರು ಉಪಸ್ಥಿತರಿದ್ದರು. 2024ರ ಮಾರ್ಚ್ ತಿಂಗಳ 23 ಹಾಗೂ 24ರಂದು ನೂತನ ಭಜನಾ ಮಂದಿರದ ಲೋಕಾರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here