ನೃತ್ಯೋಪಾಸನಾ ಕಲಾ ಕೇಂದ್ರದಲ್ಲಿ ವಿಜಯದಶಮಿ ,ಗೆಜ್ಜೆಪೂಜೆ

0

ಪುತ್ತೂರು: ನೃತ್ಯೋಪಾಸನಾ ಕಲಾಕೇಂದ್ರ ಪುತ್ತೂರಿನ ಪ್ರಧಾನ ಶಾಖೆಯಲ್ಲಿ ಅ.24ರಂದು ವಿಜಯದಶಮಿ ಸಲುವಾಗಿ ಗೆಜ್ಜೆಪೂಜೆ ಕಾರ್ಯಕ್ರಮ ನಡೆಯಿತು.ಬರೆಕೆರೆ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ನೇತೃತ್ವದಲ್ಲಿ ಗೆಜ್ಜೆಪೂಜೆ ನೆರವೇರಿತು. ಈ ವೇಳೆ ನೃತ್ಯ ವಿದ್ಯಾರ್ಥಿಗಳು ಗೆಜ್ಜೆ ಸ್ವೀಕರಿಸಿ ನೃತ್ಯ ನಮನ ಸಲ್ಲಿಸಿದರು. 

ಈ ಸಂದರ್ಭ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಪತ್ರಕರ್ತ ಪ್ರೊಫೆಸರ್ ವಿ.ಬಿ. ಅರ್ತಿಕಜೆ ರಚಿಸಿದ ‘ರಾಮ ಕೀರ್ತಿ’ ಎಂಬ ಸಂಪೂರ್ಣ ರಾಮಾಯಣದ ಸರಳ ಪುಸ್ತಿಕೆಯನ್ನು ನೃತ್ಯ ವಿದ್ಯಾರ್ಥಿಗಳಿಗೆ ವಿತರಿಸಿದರು.

LEAVE A REPLY

Please enter your comment!
Please enter your name here