ಅ.27:(ನಾಳೆ) ಪುತ್ತೂರಿನಲ್ಲಿ ಹರಿಪ್ರಸಾದ್ ರೈ ಮಠಂತಬೆಟ್ಟು ನಿರ್ಮಾಣದ ‘ಪುಳಿಮುಂಚಿ’ಯ ಗಮ್ಮತ್ತ್

0

ಪುತ್ತೂರು: ಬಹು ನಿರೀಕ್ಷಿತ ‘ಪುಳಿಮುಂಚಿ’ ತುಳು ಚಿತ್ರ ಅ.27ರಂದು ಪುತ್ತೂರು ಸೇರಿದಂತೆ ಕರಾವಳಿಯಾದ್ಯಂತ ತೆರೆ ಕಾಣಲಿದೆ.
ಬಿಗ್ ಸಿನಿಮಾಸ್ ಸಹಿತ ಮಲ್ಟಿಫ್ಲೆಕ್ಸ್, ಸಿಂಗಲ್ ಥಿಯೇಟರ್ ಗಳಲ್ಲಿ ಸಿನಿಮಾ ಮನರಂಜಿಸಲಿದೆ. ಹೆಚ್.ಪಿ.ಆರ್. ಫೌಂಡೇಶನ್ ಮುಖ್ಯಸ್ಥ ಹರಿಪ್ರಸಾದ್ ರೈ ಮಠಂತಬೆಟ್ಟು ನಿರ್ಮಾಣದ ತ್ರಿಶೂಲ್ ಶೆಟ್ಟಿ ನಿರ್ದೇಶನದ ಪುಳಿಮುಂಚಿ ಚಿತ್ರಕ್ಕೆ ಕಿಶೋರ್‌ ಕುಮಾರ್‌ ಶೆಟ್ಟಿ ಸಂಗೀತ ನೀಡಿದ್ದು, ಮಯೂರ್ ಆರ್. ಶೆಟ್ಟಿ ಸಾಹಿತ್ಯ ಮತ್ತು ಛಾಯಾಗ್ರಹಣ ಮಾಡಿದ್ದಾರೆ.‌ ಚಿತ್ರದಲ್ಲಿ ಹಾಸ್ಯದಿಗ್ಗಜರ ದಂಡೇ ಇದ್ದು ತುಳು ಚಿತ್ರಪ್ರೇಮಿಗಳಲ್ಲಿ ಪುಳಿಮುಂಚಿ ಹೊಸ ನಿರೀಕ್ಷೆ ಮೂಡಿಸಿದೆ.

ವಿನೀತ್ ಕುಮಾರ್‌ ನಾಯಕ ನಟನಾಗಿ, ಸಮತಾ ಅಮೀನ್ ನಾಯಕಿಯಾಗಿರುವ ಈ ಚಿತ್ರದಲ್ಲಿ  ರಾಹುಲ್ ಅಮೀನ್‌, ಸ್ವರಾಜ್ ಶೆಟ್ಟಿ, ಆರಾಧ್ಯ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿಕೃಷ್ಣ ಕುಡ್ಲ, ರವಿ ರಾಮಕುಂಜ, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಬೈಲೂರು, ಉಮೇಶ್ ಮಿಜಾರ್, ಪಿಂಕಿ ರಾಣಿ, ಸಂತೋಷ್ ಶೆಟ್ಟಿ, ಅದ್ವಿಕಾ ಶೆಟ್ಟಿ ತಾರಾಂಗಣದಲ್ಲಿದ್ದಾರೆ. ಅ.21ರಂದು ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಪುಳಿಮುಂಚಿ ತುಳುಚಿತ್ರದ ಪ್ರೀಮಿಯರ್ ಶೋ ನಡೆದಿದ್ದು ಅ.27ರಿಂದ ಭಾರತ್ ಸಿನಿಮಾಸ್ ನಲ್ಲಿ ಪ್ರದರ್ಶನಗೊಳ್ಳಲಿದೆ‌.

LEAVE A REPLY

Please enter your comment!
Please enter your name here