ಶಿವರಾಜ್ ಕುಮಾರ್ ಅಭಿನಯದ ‘ಘೋಸ್ಟ್’ ಸಿನಿಮಾದ ಹಾಡುಗಳಿಗೆ ಸಾಹಿತ್ಯ ಬರೆದು, ಗಾಯಕರಾಗಿ ಮಿಂಚಿದ ನಿಶಾನ್ ರೈ ಮಠಂತಬೆಟ್ಟು

0

ಪುತ್ತೂರು: ಹಲವು ಭಾಷೆಗಳಲ್ಲಿ ತಯಾರಾಗಿ ಇತ್ತೀಚೆಗೆ ತೆರೆಕಂಡ ಖ್ಯಾತ ನಟ ಡಾ. ಶಿವರಾಜ್ ಕುಮಾರ್ ಅಭಿನಯದ ‘ಘೋಸ್ಟ್’ ಚಲನಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದು, ಹಾಡು ಹಾಡಿರುವ ಪುತ್ತೂರು ಮೂಲದ ನಿಶಾನ್ ರೈ ಮಠಂತಬೆಟ್ಟು ಅವರು ಗಮನ ಸೆಳೆದಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಗಳ ಹಾಡುಗಳಿಗೆ ಸಾಹಿತ್ಯ ಬರೆದು ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆ ಸಹಾಯಕರಾಗಿ ಸಿನಿಮಾದ ಹಿನ್ನೆಲೆ ಸಂಗೀತದ ಜವಾಬ್ದಾರಿ ನಿರ್ವಹಿಸಿ ಹಾಡುಗಳನ್ನು ಹಾಡುವುದರೊಂದಿಗೆ ಸ್ಯಾಂಡಲ್ ವುಡ್ ಸಂಗೀತ ಲೋಕದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದು ಬೆಳೆಯುತ್ತಿರುವ ಪುತ್ತೂರು ಮೂಲದ ಮಂಗಳೂರಿನ ಕಲಾವಿದ ನಿಶಾನ್ ರೈ ಮಠಂತಬೆಟ್ಟು ಅವರುಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಚಂದನವನದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಎಂ.ಜಿ. ಶ್ರೀನಿವಾಸ್ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿರುವ ‘ಘೋಸ್ಟ್’ ಚಲನಚಿತ್ರಕ್ಕೆ ಸಾಹಿತ್ಯ ಬರೆದು ಹಾಡು ಹಾಡುವ ಮೂಲಕ ಮತ್ತೆ ತನ್ನ ಪ್ರತಿಭೆ ಪ್ರದರ್ಶಿಸಿದ್ದಾರೆ. ಜೈಲನ್ನೇ ಹೈಜಾಕ್ ಮಾಡುವ ಕಥೆಯನ್ನು ಹೊಂದಿರುವ ಘೋಸ್ಟ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಈ ಚಿತ್ರ ಈಗಾಗಲೇ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.


ಕನ್ನಡ ಚಲನಚಿತ್ರರಂಗದಲ್ಲಿ ಈಗಾಗಲೇ ಹಿನ್ನೆಲೆ ಗಾಯಕನಾಗಿ ಉತ್ತಮ ಹೆಸರು ಗಳಿಸಿಕೊಂಡು ಸಂಗೀತ ನಿರ್ದೇಶಕನಾಗುವ ನಿಟ್ಟಿನಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆಯಲ್ಲಿ SINGER, LYRICIST, PROGRAMMER ಆಗಿ ಸದ್ಯ ನಿಶಾನ್ ರೈ ಯವರು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
‘ಕೌಸಲ್ಯ ಸುಪ್ರಜ ರಾಮ’ ಚಿತ್ರದ ‘ಶಿವಾನಿ’ ಹಾಡು ಹಾಗೂ ನಿಶಾನ್ ಧ್ವನಿಯಲ್ಲಿ ಮೂಡಿ ಬಂದಿರುವ ಇನ್ನಿತರ ಹಲವಾರು ಚಿತ್ರಗಳ ಹಾಡುಗಳು ಈಗಾಗಲೇ ತುಂಬಾ ಜನಪ್ರಿಯವಾಗಿವೆ.


ಸುಮಾರು ಒಂದೂವರೆ ವರ್ಷಗಳಿಂದೀಚೆಗೆ ಅರ್ಜುನ್ ಜನ್ಯ ಜೊತೆಗಿದ್ದು ಅವರ ಸಂಗೀತ ನಿರ್ದೇಶನದಲ್ಲಿ ನಿಶಾನ್ ಅವರು ಕನ್ನಡ ಚಿತ್ರ ರಂಗದ ಖ್ಯಾತ ನಟರಾದ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ಧೀರೇನ್ ರಾಮ್ ಕುಮಾರ್, ರಾಕ್‌ಸ್ಟಾರ್‌ ರೂಪೇಶ್ ಶೆಟ್ಟಿ ಮುಂತಾದವರು ನಟಿಸಿರುವ ಘೋಸ್ಟ್, ಕೌಸಲ್ಯ ಸುಪ್ರಜ ರಾಮ, ಬಾನ ದಾರಿಯಲ್ಲಿ, ಲವ್ ಬರ್ಡ್ಸ್, ದಿಲ್ ಪಸಂದ್, ರೇಸರ್, ಅರ್ಧಂಬರ್ಧ ಪ್ರೇಮ ಕಥೆ, ಶಿವ 143 ಮುಂತಾದ ಕನ್ನಡ ಹಾಗೂ ಕಟಪಾಡಿ ಕಟ್ಟಪ್ಪ, ಗಮ್ಜಾಲ್ ತುಳು ಚಲನಚಿತ್ರಗಳ ಸುಮಾರು 20ಕ್ಕಿಂತಲೂ ಅಧಿಕ ಗೀತೆಗಳು ಹಾಗೂ ಹಲವಾರು ಆಲ್ಬಂ ಸಾಂಗ್ ಗಳನ್ನು ಹಾಡಿ ಚಂದನವನದ ಉತ್ತಮ ಹಿನ್ನೆಲೆ ಗಾಯಕರಲ್ಲಿ ತಾನೂ ಒಬ್ಬರಾಗಿ ಈಗಾಗಲೇ ಗುರುತಿಸಿಕೊಂಡಿದ್ದಾರೆ.


ಕರ್ನಾಟಕದ ಪ್ರತಿಷ್ಠಿತ ಮೈಸೂರು ದಸರಾ, ಹಂಪಿ ಉತ್ಸವ, ಹೊಯ್ಸಳ ಉತ್ಸವ, ಲಕ್ಕುಂಡಿ ಉತ್ಸವ, ಶಿರಸಿ ಉತ್ಸವಗಳಲ್ಲಿ ಹಾಗೂ ದೆಹಲಿ, ಮುಂಬಯಿ, ಗುಜರಾತ್, ಕೇರಳ ಸೇರಿದಂತೆ ಈಗಾಗಲೇ ಸಾವಿರಾರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿರುವ ನಿಶಾನ್ ರೈ ಅವರುಕೀರ್ತಿಶೇಷ ಚಿದಾನಂದ ಕಾಮತ್ ಅವರ ಬಾರಿಸು ಕನ್ನಡ ಡಿಂಡಿಮ ತಂಡದ ಹಾಡುಗಾರನಾಗಿ ಚಿಕ್ಕಂದಿನಲ್ಲೇ ಗುರುತಿಸಿಕೊಂಡಿದ್ದರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ಭಾಗವಹಿಸಿದ್ದ ಪುತ್ತೂರಿನ ಯುವ ಬಂಟರು ಆಯೋಜಿಸಿದ್ದ ಅದ್ದೂರಿ ಕಾರ್ಯಕ್ರಮ ಒಂದರಲ್ಲಿ ಅವರು ಹಾಡುವುದಕ್ಕೆ ಅವಕಾಶ ಮಾಡಿಕೊಟ್ಟಾಗ ವೇದಿಕೆಯಲ್ಲಿ ತಾನು ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಮುಂದೆ ಶಕುಂತಳಾ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕತಾರ್ ದೇಶದಲ್ಲಿ ನಡೆದ ‘ಬಂಟ್ಸ್ ಕತಾರ್’ ನ ಕಾರ್ಯಕ್ರಮದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನೀಡಲು ಆಹ್ವಾನಿಸಲ್ಪಟ್ಟು ನಂತರದ ದಿನಗಳಲ್ಲಿ ನಿಶಾನ್ ರೈಯವರು ಬಹರೀನ್, ಅಬುದಾಬಿ, ದುಬೈ, ಕುವೈಟ್‌ ಮುಂತಾದ ವಿದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿಯೂ ಸಂಗೀತ ಕಾರ್ಯಕ್ರಮ ನೀಡಿದ್ದರು. ‘ಕೊರೊನಾ’ ಸಂದರ್ಭದಲ್ಲಿ USA North Carolina ದ ಬಂಟ್ಸ್ ಕಾರ್ಯಕ್ರಮಕ್ಕೆ ವರ್ಚುವಲ್ ಆಗಿ ಸಂಗೀತ ಕಾರ್ಯಕ್ರಮ ನೀಡಿ ದೇಶ ವಿದೇಶಗಳಲ್ಲಿ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ಕಲಾವಿದರಾಗಿ ಬೆಳೆದು ನಿಂತಿರುವ ನಿಶಾನ್ ರೈ ಅವರು TV ರಿಯಾಲಿಟಿ ಶೋ ಗಳಲ್ಲಿಯೂ ಸ್ಪರ್ಧಿಯಾಗಿ ಭಾಗವಹಿಸಿ ಜನಪ್ರಿಯತೆ ಗಳಿಸಿದ್ದಾರೆ. ನಿಶಾನ್ ರೈ ಯವರು ಸದ್ಯ ಅರ್ಜುನ್ ಜನ್ಯ ತಂಡದ ಲೈವ್ ಶೋ ಗಳಲ್ಲಿ ಮತ್ತು ಟಿವಿ ಶೋಗಳಲ್ಲಿ ಹಾಡುಗಾರನಾಗಿ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ.


ಶೂಟಿಂಗ್ ಮುಗಿಸಿ ಈಗಾಗಲೇ ಪ್ರದರ್ಶನಕ್ಕೆ ಸಿದ್ಧಗೊಂಡಿರುವ ಚಲನಚಿತ್ರ ಒಂದಕ್ಕೆ ಸಂಗೀತ ನಿರ್ದೇಶನವನ್ನೂ ಸ್ವತಃ ನಿಶಾನ್ ಮಾಡಿದ್ದು, ಅರ್ಧಂಬರ್ಧ ಪ್ರೇಮ ಕಥೆ ಸಿನಿಮಾದ ಪೂರ್ತಿ background scoring ಕೆಲಸವನ್ನೂ ನಿರ್ವಹಿಸಿದ್ದಾರೆ.ಈ ಎಲ್ಲ ತನ್ನ ಸಾಧನೆಗಳ ಜೊತೆಗೆ MBA ವ್ಯಾಸಂಗವನ್ನು ಮಾಡುತ್ತಿರುವ ಇವರು ಬಾಲ್ಯೋಟ್ಟುಗುತ್ತು ಕರುಣಾಕರ ರೈ ಮತ್ತು ನಿರತ ಕೆ ರೈ ಮಠಂತಬೆಟ್ಟು ಇವರ ಪುತ್ರ. ನಿರೀಕ್ಷಾ ರೈಯವರ ಸಹೋದರ.

LEAVE A REPLY

Please enter your comment!
Please enter your name here