ನಿಗಮ,ಮಂಡಳಿ ನೇಮಕ ವಿಚಾರ:ನಾನು ಯಾವುದೇ ಹಕ್ಕೊತ್ತಾಯ ಮಂಡನೆ ಮಾಡಿಲ್ಲ-ಎಂ.ಬಿ.ವಿಶ್ವನಾಥ ರೈ ಸ್ಪಷ್ಟನೆ

0

ಪುತ್ತೂರು: ರಾಜ್ಯ ನಿಗಮ,ಮಂಡಳಿಗಳ ನೇಮಕ ವಿಚಾರದ ಕುರಿತು ಪ್ರಕಟವಾದ ವರದಿಗೆ ಸಂಬಂಧಿಸಿ‌ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈಯವರು ಪ್ರತಿಕ್ರಿಯೆ ನೀಡಿ,ನಾನು ಯಾವುದೇ ನೇಮಕಕ್ಕಾಗಿ ಯಾರ ಮುಂದೆಯೂ ಯಾವುದೇ ಹಕ್ಕೊತ್ತಾಯ ಮಂಡನೆ ಮಾಡಿಲ್ಲ.ಪಕ್ಷದ ಸಿದ್ಧಾಂತಕ್ಕೆ ನಾನು ಬದ್ಧ ಎಂದು ಸ್ಷಷ್ಟನೆ ನೀಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ನಾವೆಲ್ಲರೂ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಅಹರ್ನಿಶಿ ಕೆಲಸ ಮಾಡಿದ್ದೇವೆ.ಇದರಲ್ಲಿ ಯಾರೂ ಹೆಚ್ಚು ಕಡಿಮೆ ಎಂದೇನಿಲ್ಲ.ಶಾಸಕರೊಂದಿಗೆ ನಾವೆಲ್ಲರೂ ಆತ್ಮೀಯತೆಯಿಂದ ಇದ್ದೇವೆ.ಶಾಸಕರೂ ಎಲ್ಲರೊಂದಿಗೂ ಸಮಾನರಾಗಿದ್ದಾರೆ.ನಿಗಮ,ಮಂಡಳಿಗೆ ಎಲ್ಲರಿಗೂ ಅವಕಾಶವಿದೆ.ನಾವು‌ ಹಕ್ಕೊತ್ತಾಯ ಮಂಡನೆ ಮಾಡಿದ್ದೇವೆ ಎನ್ನುವುದು ಶುದ್ದ ಸುಳ್ಳು ಎಂದು ಎಂ.ಬಿ.ವಿಶ್ವನಾಥ ರೈ ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here