ನನ್ನ ಮಣ್ಣು ನನ್ನ ದೇಶ ಅಭಿಯಾನ: ಪುತ್ತೂರಿನಿಂದ ದೆಹಲಿಗೆ ಪ್ರಯಾಣ -ಬೀಳ್ಕೊಡುಗೆ

0

ಪುತ್ತೂರು: ಕೇಂದ್ರ ಸರ್ಕಾರದ ನನ್ನ ಮಣ್ಣು ನನ್ನ ದೇಶ ಅಭಿಯಾನದಡಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಸಂಗ್ರಹವಾದ “ಮೃತ್ತಿಕೆ” ಯನ್ನು ಪುತ್ತೂರಿನಿಂದ ದೆಹಲಿಗೆ ಕೊಂಡೊಯ್ಯುವವರನ್ನು ಬೀಳ್ಕೊಡಲಾಯಿತು.


ಅಭಿಯಾನದ ಸಂಚಾಲಕ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಬಿಜೆಪಿ ಬಿ ಎಲ್ ಎ 1 ಇದರ ಸಂಚಾಲಕ ಹರೀಶ್ ಬಿಜತ್ರೆ, ಪುತ್ತೂರು ಗ್ರಾಮಾಂತರ ಮಂಡಲ ಒ ಬಿ ಸಿ ಮೋರ್ಚಾ ಅಧ್ಯಕ್ಷ ಸುನೀಲ್ ದಡ್ದು ರವರು ಒಟ್ಟು 45 ಪುಣ್ಯ ಸ್ಥಳ ದೈವಸ್ಥಾನ ಹಾಗೂ ದೇವಸ್ಥಾನದಿಂದ ಸಂಗ್ರಹಿಸಿದ ಮೃತಿಕೆ ಯನ್ನು ಅಮೃತ ಕಲಶದಲ್ಲಿ ದೆಹಲಿಯ ಕರ್ತವ್ಯ ಪಥದಲ್ಲಿ ದೇಶಕ್ಕಾಗಿ ಹುತಾತ್ಮರಾದವರ ಸ್ಮರಣಾರ್ಥ ನಿರ್ಮಾಣವಾಗಲಿರುವ ಅಮೃತವನ ಸಮರ್ಪಿಸಲು ಹಾಗೂ ಪ್ರಧಾನ ಮಂತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ಪ್ರಯಾಣಿಸಿದ್ದಾರೆ. ಮಾಜಿ ಶಾಸಕ ಸಂಜೀವ ಮಠದೂರು ಅವರನ್ನು ಬೀಳ್ಕೊಟ್ಟರು. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಈ ಸಂದರ್ಭ ಜೊತೆಯಲ್ಲಿದ್ದರು.

LEAVE A REPLY

Please enter your comment!
Please enter your name here